ಡಿ.ಕೆ.ಶಿವಕುಮಾರ್ ಬಾಯಿಯಿಂದ ಈಗ ಸತ್ಯ ಹೊರಬಂದಿದೆ: ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ, ಅ. 18: ವೋಟ್ ಬ್ಯಾಂಕ್ ಗಾಗಿ ಲಿಂಗಾಯತ ವೀರಶೈವರನ್ನು ಒಡಿಯುವ ಷಡ್ಯಂತ್ರ ಮಾಡಿದರು. ಅವರದೇ ಮಂತ್ರಿಗಳನ್ನು ಛೂ ಬಿಟ್ಟು ಜಾತಿ-ಜಾತಿ ಒಡೆಯುವ ಪ್ರಯತ್ನ ಮಾಡಿದರು ಎಂಬುದಾಗಿ ಡಿ.ಕೆ.ಶಿವಕುಮಾರ್ ಬಾಯಿಯಿಂದ ಈಗ ಸತ್ಯ ಹೊರಬಂದಿದೆ ಎಂದು ಸಂಸದೆ ಶೋಭಾ ಕಾರಂದ್ಲಜೆ ಹೇಳಿದರು.
ನಾವು ಮಾಡಿದಂತದ್ದು ತಪ್ಪಾಗಿದೆ, ಅಕ್ಷಮ್ಯ ಅಪರಾಧ ಆಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕೊನೆಯಲ್ಲಾದರೂ ಅವರಿಗೆ ಜ್ಞಾನೋದಯವಾಗಿದೆ. 70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ದೇಶದಲ್ಲಿ ಜಾತಿ ಒಡೆಯುವುದನ್ನು ಮಾಡಿದ್ದಾರೆ. ಧರ್ಮವನ್ನು ಒಡೆದು ಅಧಿಕಾರದಲ್ಲಿ ಉಳಿಬೇಕು ಎಂಬ ದುರಾಸೆಯಲ್ಲಿದ್ದಾರೆ ಅವರು, ರಾಜ್ಯದ ಜನಕ್ಕೆ ಇದು ಅರ್ಥ ಆಗಿದೆ. ಕಾಂಗ್ರೆಸ್ ನಲ್ಲಿದ್ದ 120 ಸ್ಥಾನವನ್ನು 78ಕ್ಕೆ ಜನ ಇಳಿಸಿದ್ದಾರೆ. ಈಗ 78 ಸ್ಥಾನ 8ಕ್ಕೆ ಇಳಿಯುವ ಸೂಚನೆ ರಾಜ್ಯದಲ್ಲಿ ಕಾಣುತ್ತಿದೆ. ಕಾಂಗ್ರೆಸ್ ಧರ್ಮ ಒಡಿಯುವ ಕೆಲಸ ಮಾಡುತ್ತಿದೆ. ರಾಜ್ಯದ ಜನರಿಗೆ ಇದು ಅರ್ಥ ಆಗಿದೆ ಎಂದು ಉಡುಪಿಯ ಬೈಂದೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
Next Story