ಅ.28ರಂದು ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ಸಮ್ಮೇಳನ
ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖಾ ಯುನಿಟ್ ಸಮ್ಮೇಳನ 'ಯೌವನ ಮರೆಯಾಗುವ ಮುನ್ನ' ಅಕ್ಟೋಬರ್ 28 ರವಿವಾರ ಸಂಜೆ 6ರಿಂದ ಶಾಖಾಧ್ಯಕ್ಷರಾದ ಆರಿಫ್ ಬುಶ್ರಾ ಅಧ್ಯಕ್ಷತೆಯಲ್ಲಿ ಗಾಂಧಿನಗರದಲ್ಲಿ ಜರಗಲಿದೆ.
ಎಸ್ವೈಎಸ್ ಮುಳ್ಳೇರಿಯ ಝೋನ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುನ್ನಿ ಜಂಇಯ್ಯತುಲ್ ಉಲಮಾ ಸುಳ್ಯ ತಾಲೂಕು ಅಧ್ಯಕ್ಷರಾದ ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ದುಆ ನೆರವೇರಿಸಲಿದ್ದಾರೆ. ಕಬೀರ್ ಹಿಮಮಿ ಸಖಾಫಿ ಕಾಸರಗೋಡು ಮುಖ್ಯ ಪ್ರಭಾಷಣೆಗೈಯ್ಯಲಿದ್ದಾರೆ.
ಸುಳ್ಯ ಸುನ್ನಿ ಸಂಘ ಕುಟುಂಬಗಳ ನಾಯಕರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರಗಳ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಖಾಧ್ಯಕ್ಷರಾದ ಆರಿಫ್ ಬುಶ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಅನ್ಸಾರ್ ಅಧ್ಯಕ್ಷರಾದ ಹಾಜಿ ಮುಸ್ತಫಾ ಜನತಾ, ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕಾರ್, ನೌಶಾದ್ ಕೆರೆಮೂಲೆ, ಸಿದ್ದೀಕ್ ಬಿ.ಎ ನಾವೂರು ಉಪಸ್ಥಿತರಿದ್ದರು.