ಉಡುಪಿ ಜಿಲ್ಲಾಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ: ಶ್ರಾವ್ಯ ಬಾಸ್ರಿ ಪ್ರಥಮ
ಹೆಬ್ರಿ, ಅ.25: ಪೆರ್ಡೂರು ರೋಟರಿ ಕ್ಲಬ್ ಆಶ್ರಯದಲ್ಲಿ ಚಾಣಕ್ಯ ಹೆಬ್ರಿ ಇನ್ಸ್ಟಿಟ್ಯೂಟ್ ಆ್ ಮ್ಯೂಸಿಕ್ನ ಸಹಯೋಗದೊಂದಿಗೆ ಅ.24ರಂದು ಪೆರ್ಡೂರು ಮಾಂಗಲ್ಯ ಸಭಾಭವನದಲ್ಲಿ ನಡೆದ ವಾಯ್ಸಿ ಆ್ ರೋಟರಿ 2018 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆಯಲ್ಲಿ ಉಡುಪಿಯ ಶ್ರಾವ್ಯ ಬಾಸ್ರಿ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ.
ಜಿಲ್ಲೆಯ 30 ಸ್ಪರ್ಧಿಗಳು ಸೆಮಿೈನಲ್ನಲ್ಲಿ ಭಾಗವಹಿಸಿ, ಅದರಲ್ಲಿ 10 ಮಂದಿ ಫೈನಲ್ಗೆ ಆಯ್ಕೆಯಾಗಿದ್ದರು. ಲಿಸಾ ಕೊಕ್ಕರ್ಣೆ ದ್ವಿತೀಯ, ಗಂಗಾಧರ ಆಚಾರ್ಯ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ನಗದು ಬಹುಮಾನ ದೊಂದಿಗೆ ಟ್ರೋಪಿಯನ್ನು ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಪೆರ್ಡೂರು ರೋಟರಿ ಕ್ಷಬ್ ಅಧ್ಯಕ್ಷ ಸಂತೆಕಟ್ಟೆ ರಾಮದಾಸ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ.ಗಣೇಶ್ ಎ. ವಿಜೇತರಿಗೆ ಬಹುಮಾನ ವಿತರಿಸಿದರು. ರೋಟರಿ ವಲಯ ಸೇನಾನಿ ಡಾ. ಎ.ಶೇಷಪ್ಪ ರೈ, ಚಂದ್ರ ನಾಯ್ಕ, ಪೆರ್ಡೂರು ಮಾಜಿ ಮಂಡಲ ಪ್ರಧಾನ ಶಾಂತರಾಮ್ ಸೂಡ ಕೆ., ರಾಜ್ಕುಮಾರ್ ಶೆಟ್ಟಿ, ಪ್ರಮೋದ್ ರೈ ಪಳಜೆ, ಶಿವಪ್ರಸಾದ್, ಡಾ.ಜಿ.ಎಸ್.ಕೆ.ಭಟ್, ಕರುಣಾಕರ ಆಚಾರ್ಯ, ತೀರ್ಪುಗಾರ ರಾದ ಚಂದ್ರಶೇಖರ ಕೆದ್ಲಾಯ, ಜಯರಾಮ್ ಮಣಿಪಾಲ, ಮುಟ್ಲುಪಾಡಿ ಉದಯ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಬ್ರಿ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಪ್ರಭಾಕರ ಭಂಡಿ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಜಯರಾಮ್ ಶೆಟ್ಟಿ ವಂದಿಸಿದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.