ಪಡುಬಿದ್ರೆಯಲ್ಲಿ ರಾಷ್ಟ್ರೀಯ ಏಕತಾ ನಡಿಗೆ
ಪಡುಬಿದ್ರೆ, ಅ. 31: ಬೋರ್ಡ್ ಶಾಲಾ ಮೈದಾನದಲ್ಲಿ ಬುಧವಾರ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು, ಪೊಲೀಸ್ ಇಲಾಖೆ ಹಾಗೂ ಮತ್ತಿತರ ಸಂಘಟನೆಗಳ ಸಹಕಾರದೊಂದಿಗೆ ಬೋರ್ಡ್ ಓಕತಾ ನಡಿಗೆ ನಡೆಯಿತು.
ಪಡುಬಿದ್ರೆ ಎಸ್ಐ ಸತೀಶ್ ನಡಿಗೆಗೆ ಚಾಲನೆ ನೀಡಿದರು. ಪಡುಬಿದ್ರೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸರಿತಾ ವೇಗಸ್, ಉದ್ಯಮಿ ಶಬ್ಬೀರ್ ಹುಸೈನ್, ಉದ್ಯಮಿ ದಯಾನಂದ ಹೆಜಮಾಡಿ, ಉದ್ಯಮಿ ಉದಯ ಕುಮಾರ್ ಶೆಟ್ಟಿ ಇನ್ನ, ಸಚಿನ್ ನಾಯಕ್, ಗ್ರಾಮ ಪಂಚಾಯತ್ ಸದಸ್ಯರು, ಕಾರು ಮಾಲಕ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕೌಸರ್, ರಿಕ್ಷಾ ಚಾಲಕ ಮಾಲಕರ ಸಂಘದ ಪ್ರತಿನಿಧಿ ಗಳು, ದಲಿತ ಮುಖಂಡ ಶೇಖರ್ ಹೆಜಮಾಡಿ, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸತೀಶ್ ದೇವಾಡಿಗ, ಜೆಡಿಎಸ್ ಮುಖಂಡ ಅಶ್ರಫ್, ಲೀಲಾಧರ ಸಾಲ್ಯಾನ್ ಮತ್ತು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಏಕತಾ ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರಿ ಪ್ರೌಢಶಾಲೆಯಿಂದ ಪಡುಬಿದ್ರಿಯ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಪಡುಬಿದ್ರಿ ಶ್ರೀ ದೇಗುಲದವರೆಗೆ ಒಕತಾ ನಡಿಗೆಯನ್ನು ನಡೆಸಲಾಯಿತು.