ಪಟಾಕಿ ಅವಾಂತರ: ಉಡುಪಿಯಲ್ಲಿ ನಾಲ್ವರಿಗೆ ಗಾಯ
ಉಡುಪಿ, ನ.8: ಜಿಲ್ಲಾದ್ಯಂತ ಕಳೆದ ಮೂರು ದಿನಗಳಲ್ಲಿ ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವ ವೇಳೆ ಮೂವರು ಬಾಲಕರು ಸೇರಿದಂತೆ ನಾಲ್ವರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ನ.7ರಂದು ಮಣಿಪಾಲ- ಅಲೆವೂರಿನ 11ರ ಬಾಲಕ ಹಾಗೂ ನ.6ರಂದು ಉಡುಪಿ ಕೊಳಂಬೆಯ 8 ವರ್ಷದ ಬಾಲಕ ಮತ್ತು ಉಚ್ಚಿಲ ಪಣಿಯೂರಿನ 25 ವರ್ಷದ ಯುವಕನ ಕೈಯಲ್ಲಿ ಪಟಾಕಿ ಸಿಡಿದು ಅದರ ಕಿಡಿ ಕಣ್ಣಿಗೆ ತಾಗಿ ಗಾಯ ಗೊಂಡಿದ್ದಾರೆ. ಈ ಮೂವರು ಉಡುಪಿಯ ಪ್ರಸಾದ್ ನೇತ್ರಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನ.7ರಂದು ಕುಂಜಿಬೆಟ್ಟುವಿನ 14 ವರ್ಷದ ಬಾಲಕ ಪಟಾಕಿ ಹಚ್ಚುತ್ತಿರುವಾಗ ಪಟಾಕಿ ಸಿಡಿದು ಆತನ ಮೈಮೇಲೆ ಗಾಯಗಳಾಗಿವೆ. ಕೂಡಲೇ ಆತನನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್ ತಿಳಿಸಿದ್ದಾರೆ.
Next Story