ನ. 24: ಬ್ಯಾರಿ ಕಲಾವಿದರ ಸಮಾವೇಶ
ಮಂಗಳೂರು, ನ.13: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮತ್ತು ಬ್ಯಾರಿ ಕಲಾರಂಗದ ವತಿಯಿಂದ ಬ್ಯಾರಿ ಭಾಷಾ ಕಲಾವಿದರ ಸಮಾವೇಶ ಹಾಗೂ ಶಾಲಾ ಮಕ್ಕಳ ಒಪ್ಪನೆ- ಕೋಲ್ಕಲಿ ಸ್ಪರ್ಧೆಯನ್ನು ನ.24ರಂದು ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.
ನ.14ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಶೋಕಾಚರಣೆ ಹಿನ್ನೆಲೆ ಮುಂದೂಡಲಾಗಿದ್ದು, ಸಭಾ ಕಾರ್ಯಕ್ರಮ, ಬ್ಯಾರಿ ಕಥಾ ಪ್ರಸಂಗ, ನಾಟಕ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾರ್ಯಕ್ರಮದ ಸದಸ್ಯ ಸಂಚಾಲಕ ಹುಸೈನ್ ಕಾಟಿಪಳ್ಳ ತಿಳಿಸಿದ್ದಾರೆ.
Next Story