ಉಡುಪಿಯಲ್ಲಿ ಸಣ್ಣ ನೀರಾವರಿ ಸಚಿವರು
ಉಡುಪಿ, ನ.15: ರಾಜ್ಯದ ಸಣ್ಣ ನೀರಾವರಿ ಸಚಿವರು ಸಿ.ಎಸ್.ಪುಟ್ಟರಾಜು ಇಂದು ಉಡುಪಿಗೆ ಆಗಮಿಸಿದ್ದು, ಜೆಡಿಎಸ್ನ ನಾಯಕರೊಂದಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ದೇವರ ದರ್ಶನ ಪಡೆದರಲ್ಲದೇ, ಪರ್ಯಾಯ ಪಲಿಮಾರುಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿ.ಎಸ್.ಪುಟ್ಟರಾಜು ಅವರನ್ನು ಉಡುಪಿ ಜಾತ್ಯತೀತ ಜನತಾ ದಳದ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಹಾಗೂ ಇತರ ನಾಯಕರು ಸ್ವಾಗತಿಸಿದರು.
ಇಂದು ಕುಂದಾಪುರದಲ್ಲಿ ವಾಸ್ತವ್ಯ ಮಾಡುವ ಸಚಿವರು ನಾಳೆ ಬೆಳಗ್ಗೆ 8:00 ಗಂಟೆಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಸಿಗಂದೂರಿಗೆ ತೆರಳುವರು.
Next Story