ಮುರ್ಡೇಶ್ವರ ಲಯನ್ಸ್ ನಿಂದ ಮಕ್ಕಳ ದಿನಾಚರಣೆ
ಮುರ್ಡೇಶ್ವರ,ನ.15: ಲಯನ್ಸ್ ಕ್ಲಬ್ ಮುರ್ಡೇಶ್ವರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಮಣ್, ಬೇಂಗ್ರೆಯ ಮಕ್ಕಳಿಗೆ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ನಡೆಸಿ ಪಾರಿತೋಷಕ ವಿತರಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಾಗರಾಜ ಭಟ್ರವರು ಮಾತನಾಡಿ, ತಾವು ಶಿಕ್ಷಣ ಪಡೆದ ಈ ಶಾಲೆಯ ಶಿಕ್ಷಕರನ್ನು ಸ್ಮರಿಸಿಕೊಳ್ಳುತ್ತಾ, ಈ ಶಾಲೆಗೆ ಅಗತ್ಯವಿರುವ ಯಾವುದೇ ಸಹಾಯ ನೀಡಲು ಸದಾ ಸಿದ್ಧರಿರುವುದಾಗಿ ತಿಳಿಸಿದರು. ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳರವರು ಲಯನ್ಸ್ ಕ್ಲಬ್ನ ಸಾಮಾಜಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ನೀಡಿರುವ ಪರಿಕರಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಲಯನ್ ಸದಸ್ಯರಾದ ಎಮ್.ವಿ ಹೆಗಡೆಯವರು ಮಕ್ಕಳ ದಿನಾಚರಣೆಯ ಮಹತ್ವ ವಿವರಿಸಿ, ಮಕ್ಕಳ ಜವಾಬ್ದಾರಿಯ ಕುರಿತು ತಿಳುವಳಿಕೆ ನೀಡಿದರು. ಲಯನ್ ಖಜಾಂಚಿ ಜಗದೀಶ್ ಜೈನ್, ಡಾ.ವಾದಿರಾಜ ಭಟ್, ಡಾ.ಸುನೀಲ್ ಜತ್ತನ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ವೇದಿಕೆಯಲ್ಲಿದ್ದರು. ಮುಖ್ಯಶಿಕ್ಷಕಿ ಮೀನಾಕ್ಷಿ ಹೆಗಡೆ ಸ್ವಾಗತಿಸಿದರೆ, ಶಿಕ್ಷಕಿ ಸುಧಾ ಭಟ್ ವಂದಿಸಿದರು. ಶಿಕ್ಷಕಿ ಸುರೇಖಾ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
ಈ ವೇಳೆ ಶಾಲೆಗೆ ಗೋಡೆಗಡಿಯಾರ ದೇಣಿಗೆಯಾಗಿ ನೀಡಲಾಯಿತು. ಅಲ್ಲದೇ ಎಲ್ಲಾ ಮಕ್ಕಳಿಗೆ ನೋಟ್ಪುಸ್ತಕ, ಪೆನ್, ಪೆನ್ಸಿಲ್, ಸ್ಕೇಲ್, ಕ್ರೇಯಾನ್ಸ್, ರೈಟಿಂಗ್ ಪ್ಯಾಡ್, ವಾಟರ್ ಬಾಟಲ್, ಸೋಪ್, ಬಿಸ್ಕಿಟ್ ಮುಂತಾದ 14000ರೂಪಾಯಿ ಮೌಲ್ಯದ ಪರಿಕರಗಳನ್ನು ನೀಡಲಾಯಿತು. ಲಯನ್ ಸದಸ್ಯರಾದ ಗೌರೀಶ ನಾಯ್ಕ, ವಿಶ್ವನಾಥ ಕಾಮತ, ಎ.ಎನ್.ಶೆಟ್ಟಿ, ಡಾ.ಹರಿಪ್ರಸಾದ ಕಿಣಿ, ಮೋಹನ್ ನಾಯ್ಕ, ಮಂಜುನಾಥ ದೇವಾಡಿಗ, ಗಜಾನನ ಶೆಟ್ಟಿ, ಗೌರೀಶ ಟಿ.ನಾಯ್ಕ, ಯಾದವ ಮೊಗೇರ್, ರಾಜು ಮೊಗೇರ್, ಕಿರಣ ಕಾಯ್ಕಿಣಿ ಮೊದಲಾದವರು ಹಾಜರಿದ್ದು ಸಹಕರಿಸಿದರು.