ದಂಡದ ಬದಲು ವಾಹನ ಮುಟ್ಟುಗೋಲು: ಫೋನ್ ಇನ್ನಲ್ಲಿ ಉಡುಪಿ ಎಸ್ಪಿ
ಕರ್ಕಶ ಹಾರ್ನ್, ಟಿಂಟ್ ಗ್ಲಾಸ್ ವಿರುದ್ಧ ವಿಶೇಷ ಕಾರ್ಯಾಚರಣೆ
ಉಡುಪಿ, ನ.16: ಉಡುಪಿ ಮತ್ತು ಕುಂದಾಪುರದಲ್ಲಿ ಕರ್ಕಶ ಹಾರ್ನ್ ಹಾಗೂ ವಾಹನಗಳಲ್ಲಿನ ಟಿಂಟ್ ಗ್ಲಾಸ್ಗಳ ವಿರುದ್ಧ ಒಂದು ವಾರ ವಿಶೇಷ ಕಾರ್ಯಾ ಚರಣೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರಗಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಅಧೀಕ್ಷಕರ ಕಚೇರಿಯಲ್ಲಿಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಕರ್ಕಶ ಹಾರ್ನ್ ವಿರುದ್ಧ ಹಲವು ಬಾರಿ ಕಾರ್ಯಾಚರಣೆ ನಡೆಸಿದರೂ ಅದರ ಹಾವಳಿ ನಿಂತಿಲ್ಲ. ಆದುದರಿಂದ ವಿಶೇಷವಾಗಿ ಖಾಸಗಿ ಬಸ್ಗಳನ್ನು ಗುರಿಯಾಗಿರಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗುವುದು. ಈ ಬಾರಿ ದಂಡ ವಿಧಿಸುವ ಬದಲು ವಾಹನವನ್ನೇ ಮುಟ್ಟುಗೋಲು ಹಾಕಿ ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದರು.
ಉದ್ಯಾವರ ಪಡುಕೆರೆಯಲ್ಲಿ ಕಡಲ್ಕೊರೆತಕ್ಕೆ ಕಲ್ಲು ಹಾಕುವ ಲಾರಿಗಳು ರಸ್ತೆಗಳಲ್ಲೇ ನಿಲ್ಲಿಸುವುದರಿಂದ ಇತರ ವಾಹನಗಳು ಈ ರಸ್ತೆಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿದ ಎಸ್ಪಿ, ಈ ಬಗ್ಗೆ ತಕ್ಷಣವೇ ಸ್ಥಳೀಯ ಠಾಣಾಧಿಕಾರಿಗಳನ್ನು ಕಳುಹಿಸಿ ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದರು. ಉಡುಪಿ ಸಿಟಿಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್ಗಳು ಅತಿವೇಗ ದಿಂದ ಬರುವುದಲ್ಲದೆ ಕರ್ಕಶ ಹಾರ್ನ್ಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದೆ ನೀಡುತ್ತಿವೆ ಎಂದು ದೂರಲಾಯಿತು.
ಕುಂದಾಪುರದಲ್ಲಿ ಹೊರಗಿನ ರಿಕ್ಷಾದವರಿಂದ ಬಾಡಿಗೆ, ರಸ್ತೆಗೆ ನೀರು ಚೆಲ್ಲು ತ್ತಿರುವ ಮೀನು ಸಾಗಾಟದ ಲಾರಿಗಳು, ಕಲ್ಯಾಣಪುರದಲ್ಲಿ ರಿಕ್ಷಾದವರು ಮೀಟರ್ ಹಾಕದೆ ಕನಿಷ್ಠ ದರ 30ರೂ. ವಸೂಲಿ, ಕಾರ್ಕಳ ಆನೆಕೆರೆ ಜಂಕ್ಷನ್ ನಲ್ಲಿ ಹಗಲಿನ ಹೊತ್ತಿನಲ್ಲಿ ಹಾರ್ಡ್ವೇರ್ ಅಂಗಡಿಯವರ ವಾಹನಗಳು ರಸ್ತೆಯಲ್ಲೇ ನಿಲ್ಲಿಸಿ ಲೋಡ್-ಅನ್ಲೋಡ್ ಮಾಡುತ್ತಿರುವ ಕುರಿತ ದೂರು ಗಳು ಕೇಳಿ ಬಂದವು.
ಬೇಳೂರಿನಲ್ಲಿ ಅಕ್ರಮ ಗಣಿಗಾರಿಕೆ: ಕೋಟ ಬೇಳೂರಿನಲ್ಲಿ ಗ್ರಾಪಂಗೆ ಸಂಬಂಧಿಸಿದವರಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ನಿರ್ಮಾಣವಾಗಿರುವ ಬೃಹತ್ ಹೊಂಡಕ್ಕೆ ಯಾವುದೇ ತಡೆಗೋಡೆ ನಿರ್ಮಿಸ ದಿರುವುದರಿಂದ ಶಾಲಾ ಮಕ್ಕಳಿಗೆ ಅಪಾಯ ಎದುರಾಗಿದೆ ಎಂದು ಸಾರ್ವಜ ನಿಕರೊಬ್ಬರು ಕರೆ ಮಾಡಿ ದೂರಿದರು.
ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಹಾಗೂ ಶನಿವಾರ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುವುದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ದೇವಸ್ಥಾನದವರು ಯಾವುದೇ ವ್ಯವಸ್ಥೆ ಮಾಡು ತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿದ ಎಸ್ಪಿ, ಆ ಎರಡು ದಿನಗಳ ಕಾಲ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.
ಉಡುಪಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವೇಶ್ಯಾವಾಟಿಕೆ ದಂಧೆ ಹಾಗೂ ಕುಡುಕರ ಹಾವಳಿ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮತ್ತು ಬಾರಕೂರು ರಸ್ತೆ ಬದಿಯಲ್ಲೇ ಇರುವ ಚೌಳಿಕೆರೆಗೆ ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರು ಎಸ್ಪಿಗೆ ಮನವಿ ಮಾಡಿದರು.
ಇಂದ್ರಾಳಿ ಶಾಲೆಯ ಎದುರಿನ ರಾಷ್ಟ್ರೀಯ ಹೆದ್ದಾರಿ ದಾಟಲು ಮಕ್ಕಳಿಗೆ ಸಮಸ್ಯೆಯಾಗುವುದರಿಂದ ಇಲ್ಲಿ ಮೇಲ್ಸೇತುವೆ ನಿರ್ಮಿಸಬೇಕು. ಕುಂದಾಪುರದಲ್ಲಿ ಬೈಕ್ಗಳಲ್ಲಿ ಕರ್ಕಶ ಸೈಲೆನ್ಸರ್ ಅಳವಡಿಸಿರುವುದರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು. ಕಾರ್ಕಳದ ಅಂಗಡಿಯವರು ಫುಟ್ಪಾತ್ಗಳಲ್ಲಿ ಸಾಮಾನು ಗಳನ್ನು ಇರಿಸಿ ಒತ್ತುವರಿ ಮಾಡಿಕೊಂಡಿರುವುದರಿಂದ ಪಾದಾಚಾರಿಗಳು ರಸ್ತೆ ಯಲ್ಲಿ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಫೋನ್ ಇನ್ನಲ್ಲಿ ದೂರಿದರು.
ಕಾರ್ಯಕ್ರಮದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್, ಕಾರ್ಕಳ ಡಿವೈಎಸ್ಪಿ ದಿನೇಶ್ ಕುಮಾರ್, ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್, ಮಣಿಪಾಲ ನಿರೀಕ್ಷಕ ಸುದರ್ಶನ್ ಹಾಜರಿದ್ದರು.
ಮೂರು ವಾರಗಳ ಪ್ರಕರಣಗಳು
ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಲ್ಲಿ(ಅ.26ರಿಂದ) ಐದು ಮಟ್ಕಾ ಪ್ರಕರಣಗಳಲ್ಲಿ ಐವರ ಬಂಧನ, ಐದು ಇಸ್ಪೀಟ್ ಜುಗಾರಿ ಪ್ರಕರಣ ಗಳಲ್ಲಿ 40 ಬಂಧನ, ಒಂದು ಅಕ್ರಮ ಮದ್ಯ ಮಾರಾಟ, ನಾಲ್ಕು ಗಾಂಜಾ ಸೇವನೆ, ಕೋಟ್ಪಾ 52, ಕುಡಿದು ವಾಹನ ಚಾಲನೆ 22, ಕರ್ಕಶ ಹಾರ್ನ್ 120, ಚಾಲನೆಯಲ್ಲಿ ಮೊಬೈಲ್ ಬಳಕೆ 49, ಹೆಲ್ಮೆಟ್ ಧರಿಸದೆ ವಾಹನ ಚಾಲನೆ 1949, ಅತಿವೇಗದಿಂದ ವಾಹನ ಚಾಲನೆ 61, ಇತರ ಮೋಟಾರ್ ಕಾಯಿದೆ 2702 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಲಕ್ಷ್ಮಣ್ ಬ. ನಿಂಬರ್ಗಿ ಮಾಹಿತಿ ನೀಡಿದರು.