ಬೈಕ್ ಢಿಕ್ಕಿ: ಪಾದಾಚಾರಿ ಮೃತ್ಯು
ಬ್ರಹ್ಮಾವರ, ನ.17: ಹೆಗ್ಗುಂಜೆ ಗ್ರಾಮದ ಶೆಡಿಕೊಡ್ಲು ಬಳಿ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕಾಡೂರು ಗ್ರಾಮದ ತಂತ್ರಾಡಿಯ ಗೋಪಾಲ ನಾಯ್ಕ ಎಂಬವರ ಮಗ ಮಂಜುನಾಥ ನಾಯ್ಕ ಎಂದು ಗುರುತಿಸಲಾಗಿದೆ. ಇವರು ಹಾಗೂ ತೇಜ ನಾಯ್ಕ ಎಂಬವರು ನ.16ರಂದು ಸಂಜೆ 7ಗಂಟೆ ಸುಮಾರಿಗೆ ಮಂದಾರ್ತಿ ಮೇಲ್ಪೇಟೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರು ವಾಗ ಹಿಂದಿನಿಂದ ಮೈರ್ಕೋಮೆ ಕಡೆಯಿಂದ ಬಂದ ಬೈಕ್ ಮಂಜುನಾಥ ನಾಯ್ಕಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಮಂಜುನಾಥ್ ನಾಯ್ಕ ನ.17ರಂದು ಬೆಳಗ್ಗೆ 7ಗಂಟೆ ಸುಮಾರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಅಪಘಾತದಿಂದ ಬೈಕ್ ಸವಾರ ಶ್ರೀನಿವಾಸ ಕುಲಾಲ್ ಎಂಬವರು ಕೂಡ ಗಾಯಗೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story