ಸಂಸದ ನಳಿನ್ ಕುಮಾರ್ ಹೇಳಿಕೆ ಹಾಸ್ಯಸ್ಪದ: ಸುಶೀಲ್ ನೊರೊನ್ಹ
ಮಂಗಳೂರು, ನ. 19: ಸಂಸದ ನಳಿನ್ ಕುಮಾರ್ ಕಟೀಲ್ ಪಂಪ್ವೆಲ್ ಫೈ ಓವರ್ ಹಾಗೂ ತೊಕೊಟ್ಟು ಮೇಲ್ಸೇತುವೆ ಬಗ್ಗೆ ನೀಡಿರುವ ಹೇಳಿಕೆಯು ಹಾಸ್ಯಸ್ಪದವಾಗಿದು, ಕುಣಿಯಲಿಕ್ಕೆ ಅರಿಯದವ ಜಾಗ ಓರೆ ಇದೆ ಎಂಬ ಹಿರಿಯರ ಗಾದೆಗೆ ಸರಿಯಾಗಿದೆ ಎಂದು ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.
ಕಳೆದ ಒಂಭತ್ತು ವರುಷಗಳಿಂದ ಕೆಲಸ ಸಂಪೂರ್ಣಗೊಳಿಸಲು ವಿಫಲಗೊಂಡಿದ್ದು ಇದೀಗ ಭೂಮಿ ಒತ್ತುವರಿ, ಮಹಾವೀರ ವೃತ್ತ ಸ್ಥಳಾಂತರ ಬಗ್ಗೆ ಪುಕ್ಕಟೆ ಕಾರಣ ಕೊಡುವುದು ಎಷ್ಟು ಸಮಂಜಸ ? ವರ್ಷ ಗಟ್ಟಲೆ ನಿಧಾನಗತಿ ಕಾಮಗಾರಿ, ವರ್ಷ ಗಟ್ಟಲೆ ಸಂಪೂರ್ಣ ಕೆಲಸ ನಿಂತಿದ್ದು ಇದಕ್ಕೆ ಯಾರು ಹೊಣೆ ?
ಇದೀಗ ಸಾರ್ವಜನಿಕರು ಅಕ್ರೋಶಗೊಂಡಿದ್ದಾರೆಂದು ತಿಳಿದು ಕಾಮಗಾರಿ ಅಂತಿಮ ಹಂತ ತಲುಪಿದೆ ಎಂದು ಸುಳ್ಳು ಹೇಳಿಕೆ ನೀಡಿ ಪ್ರಚಾರಗಿಟ್ಟಿಸಿಕೊಳ್ಳುವು ದಕ್ಕಿಂತ ತನ್ನ ಜವಾಬ್ದಾರಿಯನ್ನು ನಿಭಾಯಿಸಿಲು ಅಸಾಧ್ಯವಾಯಿತು ಎಂದು ಪಶ್ಚಾತಾಪ ಪಟ್ಟರೆ ಸೂಕ್ತ ಎಂದು ಸುಶೀಲ್ ನೊರೊನ್ಹ ತಿಳಿಸಿದ್ದಾರೆ.
Next Story