ಕುಂದಾಪುರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ
ಕುಂದಾಪುರ, ನ.21: ಕುಂದಾಪುರದಲ್ಲಿ ಬಡಜನರ ಹೊಟ್ಟೆ ತಣಿಸಲು ತೀರಾ ಕಡಿಮೆ ಬೆಲೆಯಲ್ಲಿ ಬೆಳಗಿನ ಉಪಹಾರ, ಅಪರಾಹ್ನ ಹಾಗೂ ರಾತ್ರಿಯ ಭೋಜನವನ್ನು ನೀಡಲು ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಬುಧವಾರ ಇಲ್ಲಿ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಅತಿಥಿಗಳೊಂದಿಗೆ ಕ್ಯಾಂಟೀನ್ನಲ್ಲಿ ಲಭ್ಯವಿದ್ದ ತಿಂಡಿಯ ರುಚಿಯನ್ನು ಸವಿದ ಸಚಿವೆ, ತಿಂಡಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಸಹಾಯಕ ಉಪವಿಭಾಗಾಧಿಕಾರಿ ಭೂ ಬಾಲನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ,, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವ ಹಾಗೂ ಇತರರು ಉಪಸ್ಥಿತರಿದ್ದರು.
Next Story