ಕಾರ್ಕಳ : ನ. 30ರಂದು ಹುಬ್ಬರ್ರಸೂಲ್ ಕಾನ್ಫರೆನ್ಸ್
ಕಾರ್ಕಳ, ನ. 24: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಕಳ ರೇಂಜ್, ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕಾರ್ಕಳ ರೀಜನಲ್, ಎಸ್ಜೆಎಂ, ಎಸ್ಎಮ್ಎ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ನ.30ರಂದು ಸಾಣೂರು ವಲಿಯುಲ್ಲಾಹಿ ಶಾಹುಲ್ ಹಮೀದ್ (ಖ.ಸಿ.) ದರ್ಗಾ ವಠಾರದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮೌಲಿದ್ ಮಜ್ಲಿಸ್, ಮರ್ಹೂಮ್ ಚಿತ್ತಾರಿ ಉಸ್ತಾದ್ (ಎ.ಕೆ. ಉಸ್ತಾದ್) ಅವರ ಅನುಸ್ಮರಣೆ ಹಾಗೂ ಇತ್ತೀಚಿಗೆ ಜಾಮಿಅ ಸಅದಿಯ್ಯ ಶರೀಅತ್ ಕಾಲೇಜು ಕಾಸರಗೋಡು ಇದರ ನೂತನ ಪ್ರಾಂಶುಪಾಲರಾಗಿ ನಿಯೋಜನೆಗೊಂಡ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್ಹಾಜ್ ಬೇಕಲ್ ಇಬ್ರಾಹೀಮ್ ಮುಸ್ಲಿಯಾರ್ ಅವರಿಗೆ ಸನ್ಮಾನ ನಡೆಯಲಿದೆ.
ದುಆಶೀರ್ವಚನವನ್ನು ಸಯ್ಯಿದ್ ಮುಹಮ್ಮದ್ ತ್ವಾಹಾ ತಂಙಳ್ ಅಲ್ ಮದನಿ ಚೆರ್ವತ್ತೂರ್ ನೆರವೇರಿಸಲಿದ್ದು, ಕಾವಲ್ಕಟ್ಟೆ ಹಝ್ರತ್ ನೇತೃತ್ವ ವಹಿಸಲಿ ದ್ದಾರೆ. ಇಹ್ಸಾನ್ ಕರ್ನಾಟಕದ ಚೆಯರ್ ಮ್ಯಾನ್ ಮೌಲಾನಾ ಶಾಫೀ ಸಅದಿ ಬೆಂಗಳೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
Next Story