ದರೋಡೆಗೆ ಸಂಚು: ಓರ್ವನ ಬಂಧನ
ಹೆಬ್ರಿ, ನ.30: ವರಂಗ ಗ್ರಾಮದ ಸೂರಿ ಮಣ್ಣು ಕ್ರಾಸ್ ಎಂಬಲ್ಲಿ ಗುರುವಾರ ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದ ಐವರ ಪೈಕಿ ಓರ್ವನನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಆರೀಫ್ ಬಂಧಿತ ಆರೋಪಿ. ಉಳಿದಂತೆ ಅಬ್ದುಲ್ ರಝಾಕ್, ಅನ್ಸಾರ್, ರಫೀಕ್, ಆಸೀಫ್, ಉಮ್ಮರ್ ಫಾರೂಕ್ ಎಂಬವರು ಪೊಲೀಸ್ ದಾಳಿ ಸಂದರ್ಭ ಪರಾರಿಯಾಗಿದ್ದಾರೆ. ಬಂಧಿತನಿಂದ ಚೂರಿ, ಮೆಣಸಿನ ಹುಡಿ ಮತ್ತು ರಸ್ತೆಗೆ ಅಡ್ಡವಾಗಿ ಇಟ್ಟಿದ್ದ ಕಲ್ಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story