ಪಲಿಮಾರು ಚರ್ಚ್ನ ಪ್ರಾಂಗಣ ಉದ್ಘಾಟನೆ
ಪಡುಬಿದ್ರೆ, ಡಿ.1: ಅದಾನಿ ಸಮೂಹದ ಯುಪಿಸಿಎಲ್ ಸಂಸ್ಥೆಯು ಸಿಎಸ್ಆರ್ ಯೋಜನೆಯಡಿ ಪಲಿಮಾರು ಪಂಚಾಯತ್ ವ್ಯಾಪ್ತಿಯ ಸಂತ ಪಿಯೂಷ್ ಚರ್ಚ್ನ ಆವರಣದಲ್ಲಿ 10ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಾಂಗಣದ ಉದ್ಘಾಟನೆ ಇತ್ತೀಚೆಗೆ ಜರಗಿತು.
ನೆಲದ ಇಂಟರ್-ಲಾಕಿಂಗ್ ಕೆಲಸವನ್ನು ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುಟ್ರಾಡೊ, ಸಾಂತೂರು ಕೊಪ್ಲದ ಚರ್ಚ್ನ ಧರ್ಮಗುರು ರೆ.ಫಾ.ಲೂಯಿಸ್ ಡೇಸಾ, ಸಂತ ಪಿಯುಷ್ ಚರ್ಚ್ನ ಧರ್ಮಗುರು ಡಾ.ರಾಕ್ ಡಿಸೋಜ, ಪಲಿಮಾರು ಗ್ರಾಪಂ ಉಪಾಧ್ಯಕ್ಷ ಸುಮಂಗಲ ದೇವಾ ಡಿಗ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಚರ್ಚ್ನ ಉಪಾಧ್ಯಕ್ಷ ಡಯನಿ ಕುಟಿನೋ, ಗ್ರಾಪಂ ಗ್ರಾಪಂ ಸದಸ್ಯರಾದ ಶಿವರಾಂ ಪೂಜಾರಿ, ಸತೀಶ್, ಯುಪಿಸಿಎಲ್ನ ಎಜಿಎಂ ಆದ ಗಿರೀಶ್ ನಾವಡ, ಹಿರಿಯ ವ್ಯವಸ್ಥಪಕ ರವಿ ಆರ್.ಜೇರೆ, ಅದಾನಿ ಫೌಂಡೇಷನ್ನ ವಿನೀತ್ ಅಂಚನ್ ಉಪಸ್ಥಿತರಿದ್ದರು.
Next Story