ಕಾಡುಹಂದಿ ದಾಳಿ: ಕೃಷಿಕ ಮೃತ್ಯು
ಶಂಕರನಾರಾಯಣ, ಡಿ.7: ಕಾಡುಹಂದಿ ದಾಳಿಗೆ ಕೃಷಿಕರೊಬ್ಬರು ಮೃತಪಟ್ಟ ಘಟನೆ ಉಳ್ಳೂರು 74 ಗ್ರಾಮದ ಎಡಹಕ್ಲು ಎಂಬಲ್ಲಿ ಡಿ.5ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಎಡಹಕ್ಲು ನಿವಾಸಿ ಉದಯ ಪೂಜಾರಿ(52) ಎಂದು ಗುರುತಿಸ ಲಾಗಿದೆ. ಇವರು ಅಡಿಕೆ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ಕಾಡು ಹಂದಿ ತಿವಿತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಅವರು ಕುಂದಾ ಪುರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story