ರೈಲು ಢಿಕ್ಕಿ: ಕಾರ್ಮಿಕ ಮೃತ್ಯು
ಮಣಿಪಾಲ, ಡಿ.7: ರೈಲು ಢಿಕ್ಕಿ ಹೊಡೆದ ಪರಿಣಾಮ ಹಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತರನ್ನು ನಾಗರಾಜ(21) ಎಂದು ಗುರುತಿಸಲಾಗಿದೆ.
ಇವರು ಇತರ ಕಾರ್ಮಿಕರೊಂದಿಗೆ ಹಳಿಯಲ್ಲಿ ಜಲ್ಲಿ ಬಿಡಿಸುವ ಕೆಲಸ ಮಾಡುತ್ತಿದ್ದರು. ಆಗ ರೈಲು ಬರುವ ಶಬ್ದ ಕೇಳಿ ಇತರ ಎಲ್ಲ ಕಾರ್ಮಿಕರು ಅಲ್ಲಿಂದ ಓಡಿ ಹೋದರು. ಆದರೆ ಇದನ್ನು ಗಮನಿಸದೆ ಕೆಲಸದಲ್ಲಿ ತಲ್ಲೀನನಾಗಿದ್ದ ನಾಗರಾಜ್ಗೆ ಬಾರ್ಕೂರು ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ರೈಲು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನಾಗರಾಜ್ ಸ್ಥಳದಲ್ಲೇ ಮೃತಪಟ್ಟರು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story