ನಿವೃತ್ತ ನ್ಯಾ. ಕೆ. ಶಿವಶಂಕರ ಭಟ್ ನಿಧನ
ಪುತ್ತೂರು, ಡಿ. 10: ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿದ್ದ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗೊನೆತೋಟ ನಿವಾಸಿ ಗೋವಿಂದ ಭಟ್ ಎಂಬವರ ಪುತ್ರ ಕೆ. ಶಿವಶಂಕರ ಭಟ್ (85) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು.
ಮೃತರು ಈಶ್ವರ ಮಂಗಲ ಗಜಾನನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಬೋರ್ಡ್ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ, ಮದ್ರಾಸ್ ಯುನಿವರ್ಸಿಟಿಯಲ್ಲಿ ಕಾನೂನುಪದವಿ ಪಡೆದ 1958ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು.
ದೆಹಲಿ ಹೈಕೋರ್ಟಿನಲ್ಲಿ ಮುಖ್ಯ ನಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಈಶ್ವರಮಂಗಲ ಕೊನೆತೋಟ ನಿವಾಸಿ ಶ್ರೀ ಗಜಾನನ ವಿದ್ಯಾಸಂಸ್ಥೆಯ ಸಂಸ್ಥಾಪಕ ದಿ. ಜಿ.ಕೆ ರಾಮಯ್ಯ ಭಟ್ರವರ ಪುತ್ರರಾದ ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಅಗಲಿದ್ದಾರೆ.
Next Story