ಜ.20: ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಅಜೆಕಾರು, ಡಿ.19: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹತ್ತನೇ ವರ್ಷದ ಸಂಭ್ರಮ ಕಾರ್ಕಳದ ಐತಿಹಾಸಿಕ ಶ್ರೀಗೋಮಟೇಶ್ವರ ಬೆಟ್ಟದಲ್ಲಿ ಮುಂದಿನ ಜ.20ರ ರವಿವಾರ ನಡೆಯಲಿದೆ ಎಂದು ಸಮ್ಮೇಳನದ ರೂವಾರಿ, ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
ಸಮ್ಮೇಳನದ ಹತ್ತನೇ ವರ್ಷದ ಸಮಾರಂಭಕ್ಕಾಗಿ ಕಾರ್ಕಳದ ಖ್ಯಾತ ನ್ಯಾಯವಾದಿಎಂ.ಕೆ.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ತಯಾರಿ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಸಮಾಜ ರತ್ನ ಕಡಂದಲೆ ಸುರೇಶ ಭಂಡಾರಿ, ಸಮಾಜ ಸೇವಾಸಕ್ತ ಡಾ. ಸಂತೋಷ ಕುಮಾರ್, ಜೋತಿಷಿ ಅರುಣ್ ಭಟ್ ಎಣ್ಣೆಹೊಳೆ ಮುಂತಾದವರು ಸಮಿತಿಯಲ್ಲಿದ್ದಾರೆ.
Next Story