ಪಚ್ಚೆ ಪಜಿರ್ ತುಳು ಕವನ ಸಂಕಲನ ಬಿಡುಗಡೆ
ಮಂಗಳೂರು, ಡಿ.21: ಅಮೃತ ಪ್ರಕಾಶ ಪತ್ರಿಕೆ ಸಾರಥ್ಯದಲ್ಲಿ ನಡೆಯುವ ಸರಣಿ ಕಾರ್ಯಕ್ರಮದ 9ನೇ ಕಾರ್ಯಕ್ರಮದ ಅಂಗವಾಗಿ ಬಾಲಕೃಷ್ಣ ಪೂಜಾರಿಯವರು ಬರೆದ ‘ಪಚ್ಚೆ ಪಜಿರ್’ ತುಳು ಕವನ ಸಂಕಲನ ಗುರುವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು.
ಉದ್ಯಮಿ ನಿತಿನ್ ಕುಮಾರ್ ಕೃತಿ ಬಿಡುಗಡೆಗೊಳಿಸಿ ಶುಭಹಾರೈಸಿದರು.
ತುರವೇ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ನಿವೃತ್ತ ಶಿಕ್ಷಕಿ ಕೆ.ಎ.ರೋಹಿಣಿ, ಕೃತಿಕಾರ ಬಾಲಕೃಷ್ಣ ಪೂಜಾರಿ, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಕಾಸರಗೋಡು ಅಶೋಕ್ ಕುಮಾರ್ ಉಪಸ್ಥಿತರಿದ್ದರು.
Next Story