ಕುಂಬಳೆ: ಗೋದಲಿ, ಬಾಲಯೇಸುವಿನ ಪ್ರತಿಮೆ ಹಾನಿ
ಮಂಜೇಶ್ವರ, ಜ. 1: ಕುಂಬಳೆ ಹೋಲಿ ಫ್ಯಾಮಿಲಿ ಕಾನ್ವೆಂಟ್ ಮುಂದೆ ದುಷ್ಕರ್ಮಿಗಳು ನಡೆಸಿದ ದಾಂಧಲೆಯಲ್ಲಿ ಭಾರೀ ನಾಶನಷ್ಟವುಂಟಾಗಿದೆ.
ಕ್ರಿಸ್ಮಸ್ ಪ್ರಯುಕ್ತ ಕಾನ್ವೆಂಟ್ ಮುಂದೆ ಸ್ಥಾಪಿಸಿದ್ದ ಗೋದಲಿ, ಬಾಲಯೇಸುವಿನ ಪ್ರತಿಮೆ, ಹದಿನೈದು ಹೂವಿನ ಕುಂಡಗಳು ಹಾಗೂ ದೀಪಾಲಂಕಾರಗಳನ್ನು ನಾಶಗೊಳಿಸಲಾಗಿದೆ. ಜ.1ರಂದು ಮುಂಜಾನೆ ಈ ಘಟನೆ ನಡೆದಿದ್ದು, ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story