ಪ್ರವಾದಿ ಅವಹೇಳನ: ಟಿವಿ ನಿರೂಪಕನ ವಿರುದ್ಧ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಖಂಡನಾ ನಿರ್ಣಯ
ಮಂಗಳೂರು, ಜ.2: ಪ್ರವಾದಿ ಮುಹಮ್ಮದ್ ಮುಸ್ತಫ(ಸ.)ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಖಾಸಗಿ ಟಿವಿ ವಾಹಿನಿಯೊಂದರ ನಿರೂಪಕ ವಿರುದ್ಧ ದಕ್ಷಿಣ ಜಿಲ್ಲಾ ವಕ್ಫ್ ಸಲಹಾ ಸಮಿತಿ ಖಂಡನೆ ನಿರ್ಣಯವನ್ನು ಕೈಗೊಂಡಿದೆ.
ಮಂಗಳವಾರ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ. ಯು.ಕೆ. ಮೋನು ಕಣಚೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವಿಸಿ ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು. ತಪ್ಪಿತಸ್ಥ ಟಿವಿ ನಿರೂಪಕನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸಭೆ ಒತ್ತಾಯಿಸಿತು.
ಸಭೆಯಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ನೆಕ್ಕರೆ ಬಾವ, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಸದಸ್ಯರಾದ ನೂರುದ್ಧೀನ್ ಸಾಲ್ಮರ್, ಅಬ್ದುಲ್ ಖಾದರ್ (ಯು.ಕೆ.ಮೋನು), ಉಮರ್ ಪಜೀರ್, ಅಬ್ದುಲ್ ಜಲೀಲ್ ಕೃಷ್ಣಾಪುರ, ಅಬ್ದುಲ್ ಖಾದರ್ ಬಜ್ಪೆ, ಮುಸ್ತಫ ಸುಳ್ಯ, ಸುಲೈಮಾನ್ ಸಾಮಣಿಗೆ, ಮುಹಮ್ಮದ್ ಅಲಿ ಮಿತ್ತಬೈಲು, ರಝಾಕ್ ಕೋಟೆ, ಇಸ್ಮಾಯೀಲ್ ಉಳಾಯಿಬೆಟ್ಟು ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಎಂ.ಅಬೂಬಕರ್ ಉಪಸ್ಥಿತರಿದ್ದರು. .
Next Story