ಹಿರಿಯ ಕಾಂಗ್ರೆಸ್ ನಾಯಕ ದಿ. ಬಿ.ಎಂ. ಚಾಯಬ್ಬರ ಮನೆಗೆ ಸಚಿವ ಖಾದರ್ ಭೇಟಿ
ಮುಲ್ಕಿ, ಜ.5: ಇತ್ತೀಚೆಗೆ ನಿಧನರಾದ ಮುಲ್ಕಿ ಸಮೀಪದ ಕೆ.ಎಸ್. ರಾವ್ ನಗರದ ಹಿರಿಯ ಕಾಂಗ್ರೆಸ್ ನಾಯಕ, ರಾಜಕೀಯ ಮುತ್ಸದ್ದಿ ಹಾಜಿ ಬಿ.ಎಂ. ಚಾಯಬ್ಬರ ಮನೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶನಿವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಮುಲ್ಕಿ ನ.ಪಂ. ಮುಖ್ಯಾಧಿಕಾರಿಗಳಾದ ಇಂದು ಎಂ., ಅರೋಗ್ಯಾಧಿಕಾರಿ ಲಿಲ್ಲಿ ನಾಯರ್, ಸದಸ್ಯರಾದ ಬಿ.ಎಂ. ಆಸಿಫ್, ಪುತ್ತು ಬಾವ, ವಿಮಲಾ ಪೂಜಾರಿ, ಬಶೀರ್ ಕುಳಾಯಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್ ಹಳೆಯಂಗಡಿ, ಜೆಡಿಎಸ್ ನಾಯಕರಾದ ನವೀನ್ ಪುತ್ರನ್, ಬಶೀರ್, ಮನ್ಸೂರ್ ಲಿಂಗಪ್ಪಯ್ಯಕಾಡು, ಕಾಂಗ್ರೆಸ್ ನಾಯಕರಾದ ಸಮೀರ್ ಎ.ಎಚ್., ಬಿ.ಎಂ. ಇದಿನಬ್ಬ, ವಸಂತ್ ಪೂಜಾರಿ, ಹುಸೈನಬ್ಬ, ಜೀವನ್ ಪೂಜಾರಿ, ಕೋಲ್ನಾಡು ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷ ರಫೀಕ್ ಎಚ್., ಜನಾರ್ದನ ಕೆಎಸ್ರಾವ್ ನಗರ, ದರ್ಮಾನಂದ ತೋಕೂರು ಮತ್ತಿತರರು ಉಪಸ್ಥಿತರಿದ್ದರು.