ಪಡುಬಿದ್ರಿ : ನವಯಗ ಕಂಪೆನಿ ವಿರುದ್ಧ ಅನಿರ್ಧಿಷ್ಠಾವಧಿ ಪ್ರತಿಭಟನೆ
ಪಡುಬಿದ್ರಿ, ಜ. 5: ನವಯು ಕಂಪೆನಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾಪು ತಾಲ್ಲೂಕು ಘಟಕದ ವತಿಯಿಂದ ಜನವರಿ 7ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯಲಿದೆ.
ನವಯುಗ ಕಂಪೆನಿ ಸುಂಕ ವಸೂಲಾತಿ ಕೇಂದ್ರದ ಇಬ್ಬಗೆ ನೀತಿ ಹಾಗೂ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಯಲಿದ್ದು, ಪಡುಬಿದ್ರಿ ಟೆಂಪೋ ನಿಲ್ದಾಣದ ಬಳಿ ಬೆಳಗ್ಗೆ 10ರಿಂದ ಪ್ರತಿಭಟನೆ ಆರಂಭವಾಗಲಿದೆ. ಈ ಪ್ರತಿಭಟನೆ ರಾಜಕೀಯೇತರವಾಗಿದ್ದು, ಜನಪ್ರತಿನಿಧಿಗಳು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಹಲವಾರು ಸಮಾಜ ಸೇವಾ ಸಂಘಟನೆಗಳು ಬೆಂಬಲ ಸೂಚಿಸಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story