ಶತಾಯುಷಿ ಕೆಮ್ಮಾರ ಇಸ್ಮಾಯಿಲ್ ಹಾಜಿ ನಿಧನ
ಕಡಬ, ಜ. 7: ಹಲವಾರು ದಶಕಗಳ ಕಾಲ ಕೆಮ್ಮಾರ ಮುಹಿಯುದ್ದೀನ್ ಜುಮಾ ಮಸ್ಜಿದ್ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಕೆಮ್ಮಾರ ಇಸ್ಮಾಯಿಲ್ ಹಾಜಿ (107) ಸೋಮವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರು ಸಕಲೇಶಪುರದಲ್ಲಿ ಟಿಂಬರ್ ಮರ್ಚೆಂಟ್ ಉದ್ಯಮ ನಡೆಸುತ್ತಿದ್ದರು. ತದನಂತರದ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಗತಿಪರ ಕೃಷಿಕರಾಗಿ ಹಲವಾರು ಕೂಲಿ ಕಾರ್ಮಿಕರ ಜೀವನಕ್ಕೆ ಸಹಕಾರಿಯಾಗಿದ್ದರು.
ಮೃತರು ತನ್ನ ಕುಟುಂಬದ ಐದು ತಲೆಮಾರುಗಳನ್ನು ಒಳಗೊಂಡಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story