ಕಾರ್ಕಳ: ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ, ಜ.10: ಯಾವುದೋ ವಿಚಾರದಿಂದ ಮನನೊಂದ ತಾಲೂಕಿನ ಕಾಂತಾವರ ಗ್ರಾಮದ ಹರಿ ಭಟ್ ಎಂಬವರ ಪುತ್ರ ಶಶಿಕಾಂತ ಭಟ್ (19) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆ 7 ರಿಂದ 8ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಮಾಳಿಗೆ ಮುಚ್ಚಿದ ಚಾವಣಿಯ ಮಧ್ಯ ಇರುವ ಮರದ ಹಲಗೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story