ಕುಂದಾಪುರ ಪ್ಲೈಓವರ್ ಕಾಮಗಾರಿ: ವಾಹನ ಸಂಚಾರದಲ್ಲಿ ಬದಲಾವಣೆ
ಉಡುಪಿ, ಜ.10: ಕುಂದಾಪುರದ ಶಾಸ್ತ್ರೀ ಸರ್ಕಲ್ನಲ್ಲಿ ಪ್ಲೈಓವರ್ ಕಾಮಗಾರಿ ಸಂಬಂಧ, ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಕುಂದಾಪುರದಿಂದ ಉಡುಪಿ, ಮಂಗಳೂರು ಕಡೆಗೆ ಹೋಗುವ ವಾಹನ ಗಳು ಪ್ಲೈ ಓವರ್ ಅಡಿಭಾಗದಿಂದ ಶರೋನ್ ಹೋಟೆಲ್ ಹತ್ತಿರ ಬಲಕ್ಕೆ ತಿರುಗಿ ಸರ್ವೀಸ್ ರಸ್ತೆಯಲ್ಲಿ ಹೋಗಬೇಕು. ಉಡುಪಿ ಮತ್ತು ಕುಂದಾಪುರದಿಂದ ಬೈಂದೂರು, ಕೊಲ್ಲೂರು, ಕಾರವಾರ ಕಡೆ ಹೋಗುವ ವಾಹನಗಳು ಜೆ.ಕೆ ಟವರ್ಸ್ ಹತ್ತಿರ ಎಡಕ್ಕೆ ತಿರುಗಿ ಸವೀಸ್ರ್ ರಸ್ತೆ ಮೂಲಕ ತೆರಳಬೇಕು.
ಬೈಂದೂರು, ಕೊಲ್ಲೂರು ಕಡೆಯಿಂದ ಉಡುಪಿ, ಮಂಗಳೂರು ಕಡೆಗೆ ಹೋಗುವ ವಾಹನಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹತ್ತಿರ ಎಡಕ್ಕೆ ತಿರುಗಿ ಸರ್ವೀಸ್ ರಸ್ತೆ ಮೂಲಕ ಸಾಗಬೇಕು. ಜೊತೆಗೆ ಕುಂದಾಪುರ ಕಡೆಗೆ ಹೋಗುವವರು ಶರೋನ್ ಹೋಟೆಲ್ ಹತ್ತಿರ ಬಲಕ್ಕೆ ತಿರುಗಿ ಪ್ಲೈಓವರ್ ಕೆಳಗಡೆಯಿಂದ ಕುಂದಾಪುರ ಪೇಟೆಗೆ ಹೋಗಬೇಕು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳ ಸುಗಮ ಸಂಚಾರಕ್ಕಾಗಿ ಹಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದವರೆಗೆ ಹಾಗೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಹಂಗಳೂರಿನವರೆಗೆ ಸರ್ವೀಸ್ ರಸ್ತೆಗಳಲ್ಲಿ ಏಮುಖ ಸಂಚಾರವಾಗಿ ಚಲಿಸಬೇಕು. ಸರ್ವಿಸ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.