ಹೊಸದಿಲ್ಲಿಯ ಗಣರಾಜ್ಯೋತ್ಸವ ಪಥಸಂಚಲನಕ್ಕೆ ವಿವೇಕಾನಂದ ಕಾಲೇಜ್ ವಿದ್ಯಾರ್ಥಿನಿ ಆಯ್ಕೆ
ಪುತ್ತೂರು,ಜ.11: ಇಲ್ಲಿನ ವಿವೇಕಾನಂದ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ, ಎನ್ಸಿಸಿ ಘಟಕದ ಸದಸ್ಯೆ ಸಾರ್ಜೆಂಟ್ ಪ್ರೀತಿ ಡಿ ಅವರು ಜ.26ರಂದು ಹೊಸದಿಲ್ಲಿಯ ರಾಜಪಥ್ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಆಯ್ಕೆಯಾಗಿದ್ದಾರೆ.
ಮಡಿಕೇರಿ ಬೆಟಾಲಿಯನ್ನಿಂದ ಆಯ್ಕೆಯಾದ ಕೇವಲ ಮೂರು ವಿದ್ಯಾರ್ಥಿಗಳಲ್ಲಿ ಅವರಿಗೆ ಅವಕಾಶ ಲಭಿಸಿದೆ. ಅವರು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ನಿವಾಸಿ, ನಿವೃತ್ತ ಸೈನಿಕ ರಾಮ ಡಿ ಹಾಗೂ ಹೇಮಾ ಡಿ ದಂಪತಿ ಪುತ್ರಿ.
Next Story