ಜ. 17: ಎಸ್ಸೆಸ್ಸೆಫ್ ಪಟ್ಲ ಶಾಖಾ ಕಾಲ್ನಡಿಗೆ ಜಾಥಾ, ಪಬ್ಲಿಸಿಟಿ ಕನ್ವೆನ್ಷನ್
ಮಂಗಳೂರು, ಜ. 16: ಬೆಂಗಳೂರಿನಲ್ಲಿ ಜ.27ರಂದು ನಡೆಯುವ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಪ್ರಚಾರಾರ್ಥ ಎಸ್ಸೆಸ್ಸೆಫ್ ಪಟ್ಲ ಶಾಖೆ ವತಿಯಿಂದ ಜ. 17ರ ಸಂಜೆ 6:30ಕ್ಕೆ ಪಟ್ಲದಿಂದ ಕಲ್ಲಾಪು ರಾಷ್ಟ್ರೀಯ ಹೆದ್ದಾರಿವರೆಗೆ ಕಾಲ್ನಡಿಗೆ ಜಾಥಾ ಹಾಗೂ ಕಲ್ಲಾಪು ಪಬ್ಲಿಸಿಟಿ ಕನ್ವೆನ್ಷನ್ ಹಮ್ಮಿಕೊಳ್ಳಲಾಗಿದೆ.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಶಮೀರ್ ಸೇವಂತಿಗುಡ್ಜೆ ಅಧ್ಯಕ್ಷತೆ ವಹಿಸಲಿರುವರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಸೈಯ್ಯದ್ ಖುಬೈಬ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿರುವರು.
ಮುಸ್ತಫಾ ಮಾಸ್ಟರ್ ಉಳ್ಳಾಲ ಮುಖ್ಯ ಭಾಷಣ ಮಾಡಲಿರುವರು. ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರಾದ ಉಸ್ಮಾನ್ ಕಲ್ಲಾಪು, ಎಸ್ ವೈ ಎಸ್ ನಾಯಕರಾದ ಅಲ್ತಾಫ್ ಕುಂಪಲ, ನವಾಝ್ ಸಖಾಫಿ ಉಳ್ಳಾಲ, ಶರೀಫ್ ಅಮ್ಜದಿ ಹಾಗೂ ಸಾಮಾಜಿಕ, ಸಂಘಟನಾ ನಾಯಕರುಗಳು ಭಾಗವಹಿಸಲಿರುವರು ಎಂದು ಎಸ್ಸೆಸ್ಸೆಫ್ ಪಟ್ಲ ಶಾಖಾಧ್ಯಕ್ಷ ನಝೀರ್ ಪಟ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story