ಬಸ್ರೂರು: ಲಾರಿ - ಸ್ಕೂಟರ್ ಢಿಕ್ಕಿ: ಮಹಿಳೆ ಮೃತ್ಯು
ಕುಂದಾಪುರ, ಜ.17: ಲಾರಿಯೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗುರುವಾರ ಸಂಜೆ ಬಸ್ರೂರು ಸಮೀಪದ ಮಾರ್ಗೊಳ್ಳಿ ದರ್ಗಾ ಸಮೀಪ ನಡೆದಿದೆ.
ಮೃತರನ್ನು ಸ್ಕೂಟರ್ನಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದ ಕುಂದಾಪುರ ಕೋಡಿಯ ಹಾಜಿ ಸಾಹೇಬ್ ಎಂಬವರ ಪತ್ನಿ ಮೈಮುನಾ(50) ಎಂದು ಗುರು ತಿಸಲಾಗಿದೆ. ಸ್ಕೂಟರ್ ಸವಾರ ಹಾಜಿ ಸಾಹೇಬ್ (55) ಗಾಯಗೊಂಡಿದ್ದಾರೆ.
ಇವರಿಬ್ಬರು ಮನೆಯಿಂದ ಮಾರ್ಗೊಳ್ಳಿ ದರ್ಗಾಕ್ಕೆ ಸ್ಕೂಟರ್ನಲ್ಲಿ ಹೋಗಿದ್ದು, ಪ್ರಾರ್ಥನೆ ನಡೆಸಿದ ಬಳಿಕ ಮನೆಗೆ ಹೋಗುತ್ತಿದ್ದಾಗ ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಲಾರಿಯು ಹಿಂಬದಿಯಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಹಿಂಬದಿಯಲ್ಲಿ ಕುಳಿತಿದ್ದ ಮೈಮುನಾ ಲಾರಿಯಡಿಗೆ ಬಿದ್ದಿದ್ದು, ಲಾರಿಯ ಚಕ್ರ ಅವರ ಮೇಲೆ ಹರಿಯಿತ್ತೆನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಮೈಮುನಾ ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story