ಗಣರಾಜ್ಯೋತ್ಸವ ಪರೇಡ್ಗೆ ಅಲೋಶಿಯಸ್ ಕಾಲೇಜಿನ ಮೇಘನಾ ಆಯ್ಕೆ
ಮಂಗಳೂರು, ಜ.17: ಸಂತ ಅಲೋಶಿಯಸ್ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸಿಪಿಎಲ್ ಮೇಘನಾ ಇದೇ ಜ.26ರಂದು ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಈ ಪೆರೇಡ್ನಲ್ಲಿ ಭಾಗವಹಿಸಲು ನಡೆಸಲಾದ ಎಳು ದಿನಗಳ ಕ್ಯಾಂಪ್ನಲ್ಲಿ ಅವರು ಮಂಗಳೂರು ಎನ್ಸಿಸಿ ಗ್ರೂಪ್ನ್ನು ಪ್ರತಿನಿಧಿಸಿದ್ದರು. ಇದರಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಸಲಾದ ಎರಡು ಕ್ಯಾಂಪ್ನಗಳಲ್ಲಿ 18 ಕರ್ನಾಟಕ ಬೆಟಾಲಿಯುನ್ನು ಪ್ರತಿನಿಧಿಸಿದ್ದರು.
2018ರ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆದ ಏರ್ಫೋರ್ಸ್ ಬೇಸ್ನಲ್ಲಿ ನಡೆದ ಮೂರು ಕ್ಯಾಂಪ್ಗಳಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಅವರು ನವದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟನ್ನು ಪ್ರತಿನಿಧಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story