ಜೋಗಿಬೆಟ್ಟು: ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ
ಉಪ್ಪಿನಂಗಡಿ, ಜ. 18: ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ಮತ್ತು ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ನೂತನ ಪ್ರಯಾಣಿಕರ ತಂಗುದಾಣದ ಉದ್ಘಾಟನಾ ಸಮಾರಂಭವು ಶುಕ್ರವಾರದಂದು ಮಧ್ಯಾಹ್ನ ನಡೆಯಿತು.
ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ಅಧ್ಯಕ್ಷ ಹಾಜಿ ಝಕೀರ್ ಹುಸೈನ್ ಅಗ್ನಾಡಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಜೋಗಿಬೆಟ್ಟು ಮಸೀದಿಯ ಖತೀಬ್ ಹಾಜಿ ಯು ಕೆ ಕಲಂದರ್ ಮದನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರ್ ಟಿ ಎನ್ ಕೆ ಪ್ರಕಾಶ್ ಕಾರಂತ ಉದ್ಘಾಟಿಸಿದರು.
ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಯುಕೆ ಇಸುಬ್, ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ದಿವಾಕರ ಆಚಾರ್ಯ ಈ ಸಂದರ್ಭದಲ್ಲಿ ಮಾತನಾಡಿದರು.
ಅಬ್ದುಲ್ ರಹಮಾನ್ ಯೂನಿಕ್, ಶಿವ ಶಂಕರ್ ನಾಯಕ್, ಶ್ರೀ ಸುಬ್ರಹ್ಮಣ್ಯ ರಾವ್, ಅರುಣ್ ಡಿ, ಇಕ್ಬಾಲ್ ಜೋಗಿಬೆಟ್ಟು ಹಾಗು ಇತರರು ಉಪಸ್ಥಿತರಿದ್ದರು.
ಜಾಫರ್ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.