ಶಾಂತಿನಗರ ಗುತ್ತಕಾಡು ಮಸೀದಿಯ ಅಧ್ಯಕ್ಷರಾಗಿ ಮೂರನೇ ಬಾರಿಗೆ ಅಬ್ದುಲ್ ರಹ್ಮಾನ್ ಅವಿರೋಧ ಆಯ್ಕೆ
ಅಬ್ದುಲ್ ರಹ್ಮಾನ್
ಕಿನ್ನಿಗೋಳಿ, ಜ. 20: ಇಲ್ಲಿನ ಶಾಂತಿನಗರ ಗುತ್ತಕಾಡು ಖಿಲ್ರಿಯಾ ಜುಮಾ ಮಸೀದಿಯ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯು ಟಿ.ಕೆ. ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
2019 ರ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಮೂಲಕ ಅವರು ಸತತ ಮೂರು ವರುಷಗಳಿಂದ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ. ಉಪಾಧ್ಯಕ್ಷರಾಗಿ ಟಿ.ಕೆ. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎಚ್. ಅಬ್ದುಲ್ ಜಲೀಲ್, ಜೊತೆ ಕಾರ್ಯದರ್ಶಿಯಾಗಿ ಜೆ.ಸಯ್ಯದ್, ಕೋಶಾಧಿಕಾರಿಯಾಗಿ ಮೀರಾ ಸಾಬ್, ಲೆಕ್ಕ ಪರಿಶೋಧಕರಾಗಿ ಟಿ.ಎ.ಹನೀಫ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ.ಎಚ್. ಮಯ್ಯದ್ದಿ, ಟಿ.ಹಸನಬ್ಬ, ಟಿ.ಎ. ನಝೀರ್, ಅಸ್ಕರ್ ಅಲಿ, ಸಿದ್ದೀಕ್ ಎಫ್., ಕೆ.ಆರಿಫ್, ವಿ.ಅಬೂಬಕ್ಕರ್, ನಾಸಿರ್, ಎಂ.ಖಾದರ್, ಗುಲಾಂ ಹುಸೇನ್, ಸೈದಾಲಿ, ಎಸ್. ಶೇಖಬ್ಬ, ನವಾಝ್ ಕಲ್ಕರೆ, ಬಿ. ಮುಹಮ್ಮದ್, ಇ. ಖಾದರ್, ಇಬ್ರಾಹಿಂ ಕಲ್ಕರೆ, ಎ. ರಝಾಕ್, ರಫೀಕ್ ಇಡ್ಯ, ಅಬೂಸಾಲಿಹ್ ಅವರನ್ನು ಆಯ್ಕೆ ಮಾಡಲಾಯಿತು.