ಅಕ್ರಮ ಜಾನುವಾರು ಸಾಗಾಟ: ನಾಲ್ವರ ಸೆರೆ
ಅಮಾಸೆಬೈಲು, ಜ.21: ಅಶೋಕ ಲೈಲಾಂಡ್ ಕಂಪೆನಿಯ 207 ವಾಹನ ದಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಅಮಾಸೆಬೈಲು ಪೊಲೀಸರು ಜ.20ರಂದು ಬೆಳಗ್ಗೆ 11.45ರ ಸುಮಾರಿಗೆ ಹೊಸಂಗಡಿಯ ಚೆಕ್ಪೋಸ್ಟ್ ಸಮೀಪ ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರವಿ ಕುಮಾರ, ರಮೇಶ(35), ಚಂದ್ರಪ್ಪ(36), ಚಿದಾನಂದ ಯಾನೆ ಚಿದಾ(30) ಬಂಧಿತ ಆರೋಪಿಗಳು. ಇವರಿಂದ ಆರು ಜಾನುವಾರು ಹಾಗೂ ವಾಹನವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story