ಕಾರವಾರ ಸಮುದ್ರದಲ್ಲಿ ದೋಣಿ ದುರಂತ: ಮಗುವಿನ ಮೃತದೇಹ ಪತ್ತೆ
ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ
ಕಾರವಾರ, ಜ. 22: ಉತ್ತರ ಕನ್ನಡ ಜಿಲ್ಲೆ ಕಾರವಾರದ ಕೂರ್ಮಗಡ ಸಮೀಪ ದೋಣಿ ದುರಂತದಲ್ಲಿ ನೀರುಪಾಲಾಗಿದ್ದ ಹಾವೇರಿ ಮೂಲದ ಕಿರಣ್ (5 ) ಮೃತದೇಹ ಇಂದು ಪತ್ತೆಯಾಗಿದೆ. ಇದರೊಂದಿಗೆ ಪತ್ತೆಯಾದ ಶವಗಳ ಸಂಖ್ಯೆ 9ಕ್ಕೇರಿದೆ.
ನಾಪತ್ತೆಯಾದವರಿಗಾಗಿ ಪೊಲೀಸ್ ಇಲಾಖೆ, ಟ್ಯಾಗೋರ್ ಬೀಚ್ ಸಮಿತಿ ಸಿಬ್ಬಂದಿ, ಲೈಫ್ ಗಾರ್ಡ್ಸ್ ತಂಡಗಳನ್ನು ರಚಿಸಲಾಗಿದೆ. ಇವು ಕಡಲತೀರದಲ್ಲಿ ಶೋಧ ನಡೆಸುತ್ತಿವೆ, ಇದಲ್ಲದೇ ನೌಕಾದಳದ ಹೆಲಿಕಾಫ್ಟರ್ ಹಾಗೂ ಭಾರತೀಯ ಕೋಸ್ಟ್ ಗಾರ್ಡ್ ನ ದೋಣಿಗಳು ಶೋಧ ಕಾರ್ಯದಲ್ಲಿ ತೊಡಗಿವೆ.
ಇನ್ನು ಸ್ಥಳೀಯ ಮೀನುಗಾರರು ಸಹ ಮೀನುಗಾರಿಕೆ ಬಂದ್ ಮಾಡಿ ನಾಪತ್ತೆಯಾದವರ ಹುಡುಕಾಟದಲ್ಲಿ ತೊಡಗಿದ್ದಾರೆ.