ಮಲ್ಪೆ: ಸಿದ್ದಗಾಂಗಾ ಸ್ವಾಮೀಜಿಗೆ ಮರಣೋತ್ತರ ಭಾರತರತ್ನ ನೀಡುವಂತೆ ಒತ್ತಾಯಿಸಿ ಮರಳಶಿಲ್ಪ
ಮಲ್ಪೆ, ಜ.22: ಲಿಂಗೈಕ್ಯರಾದ ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಕಲಾವಿದರ ತಂಡವು ಇಂದು ಮಲ್ಪೆ ಬೀಚ್ನಲ್ಲಿ ಅವರ ಮರಳ ಶಿಲ್ಪವನ್ನು ರಚಿಸಿತು.
ಕರ್ನಾಟಕ ಲಲಿತಾ ಅಕಾಡೆಮಿ ಸದಸ್ಯ ರಾಘವೇಂದ್ರ ಕೆ.ಅಮೀನ್, ಕಲಾವಿದರಾದ ಮಹೇಶ್ ಚೇಂಡ್ಕಳ, ಸುರೇಶ್ ಪಿ. ಈ ಮರಳ ಶಿಲ್ಪವನ್ನು ಬೆಳಗ್ಗೆ 11ಗಂಟೆಯಿಂದ ಸಂಜೆ 4ಗಂಟೆಗಳ ಅವಧಿಯಲ್ಲಿ ರಚಿಸಿದ್ದಾರೆ.
ಇದರಲ್ಲಿ ಸ್ವಾಮೀಜಿಯ ಭಾವಚಿತ್ರ, ಭಾರತರತ್ನ ಪ್ರಶಸ್ತಿ ಹಾಗೂ ಅಕ್ಷರ ದಾಸೋಹವನ್ನು ಬಿಂಬಿಸುವ ಪುಸ್ತಕವನ್ನು ಆಕರ್ಷಕವಾಗಿ ರಚಿಸಲಾಗಿದೆ.