ಉಡುಪಿ: ರಾಜಕಾರಣಿ, ಉದ್ಯಮಿ ಸಹಿತ ಇಬ್ಬರ ಮನೆ, ಕಚೇರಿಗಳಿಗೆ ಐಟಿ ದಾಳಿ
ಉಡುಪಿ, ಜ.23: ಜಿಲ್ಲೆಯ ಕಾರ್ಕಳ ಮತ್ತು ಉಡುಪಿಯಲ್ಲಿ ಉದ್ಯಮಿ, ರಾಜಕಾರಣಿಯೊಬ್ಬರ ಮತ್ತು ಕ್ರಷರ್ ಮಾಲಕರೊಬ್ಬರ ಮನೆ, ಕಚೇರಿಗಳ ಮೇಲೆ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜಕಾರಣಿ ಮತ್ತು ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತು ಕ್ರಷರ್ ಮಾಲಕ ಜಾಯ್ ಮನೆ, ಕಚೇರಿ ಹಾಗೂ ಕಾರ್ಖಾನೆಗಳಿಗೆ ಬೆಂಗಳೂರಿನ ಐಟಿ ಅಧಿಕಾರಿಗಳ ತಂಡ ಏಕ ಕಾಲದಲ್ಲಿ ದಾಳಿ ನಡೆಸಿದೆ.
ಮುನಿಯಾಲಿನಲ್ಲಿರುವ ಉದಯ ಕುಮಾರ್ ಶೆಟ್ಟಿಯವರ ಮನೆ, ಗೇರು ಕಾರ್ಖಾನೆ, ಕೋಟದಲ್ಲಿರುವ ಫಿಶ್ಮಿಲ್ ಸಹಿತ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯ ಇತರ ಉದ್ಯಮಿಗಳ ಮನೆ ಮೇಲೂ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Next Story