ಜ. 31ರಂದು ಪಾಟ್ರಕೋಡಿಯಲ್ಲಿ ಮರ್ಹೂಮ್ ಮಿತ್ತಬೈಲ್ ಉಸ್ತಾದ್ ಮೆಮೋರಿಯಲ್ ಬಿಲ್ಡಿಂಗ್ ಉದ್ಘಾಟನೆ
ವಿಟ್ಲ, ಜ. 30: ಎಸ್ಕೆಎಸ್ಸೆಸ್ಸೆಫ್ ಪಾಟ್ರಕೋಡಿ - ಕುಕ್ಕರಬೆಟ್ಟು ಶಾಖಾ ವತಿಯಿಂದ ಮರ್ಹೂಮ್ ಶೈಖುನಾ ಮಿತ್ತಬೈಲ್ ಉಸ್ತಾದ್ ಮೆಮೋರಿಯಲ್ ಬಿಲ್ಡಿಂಗ್, ಶಂಸುಲ್ ಉಲಮಾ ವೆಲ್ಫೇರ್ ಟ್ರಸ್ಟ್ ಇದರ ಉದ್ಘಾಟನಾ ಸಮಾರಂಭ ಹಾಗೂ ಮಜ್ಲಿಸುನ್ನೂರು ವಾರ್ಷಿಕ ಕಾರ್ಯಕ್ರಮವು ಜ. 31ರಂದು ಸಂಜೆ ಪಾಟ್ರಕೋಡಿ ವರಕ್ಕಲ್ ನಗರದ ಮರ್ಹೂಮ್ ಅತ್ತಿಪೆಟ್ಟ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸೈಯದ್ ಜಿಫ್ರೀ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದು ಎಸ್ಕೆಎಸ್ಸೆಸ್ಸೆಫ್ ಶಾಖಾದ್ಯಕ್ಷ ಹಾಜಿ ಅಹ್ಮದ್ ಕುಕ್ಕರಬೆಟ್ಟು ಅಧ್ಯಕ್ಷತೆ ವಹಿಸುವವರು.
ಕೇರಳ - ಮಲಪ್ಪುರಂ ನ ಸಯ್ಯದ್ ನಜ್ಮುದ್ದೀನ್ ಪೂಕೋಯ ತಂಙಳ್ ಮುಖ್ಯ ಬಾಷಣಗೈಯಲಿದ್ದು, ಸಯ್ಯದ್ ಅಮೀರ್ ತಂಙಳ್ ಕಿನ್ಯ ಮಜ್ಲಿಸುನ್ನೂರ್ ನ ನೇತೃತ್ವ ವಹಿಸಲಿದ್ದಾರೆ.
ಸೈಯದ್ ಶರಪುದ್ದೀನ್ ತಂಙಳ್ ಸಾಲ್ಮರ, ಸಯ್ಯದ್ ಯಹ್ಯಾ ತಂಙಳ್ ಪೋಳ್ಯ, ಬಂಬ್ರಾಣ ಉಸ್ತಾದ್, ಉಸ್ಮಾನ್ ಪೈಝಿ ತೋಡಾರ್, ಮೂಸಲ್ ಪೈಝಿ, ಅನೀಸ್ ಕೌಸರಿ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟನೆ ತಿಳಿಸಿದೆ.