ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ
ಮಂಗಳೂರು, ಜ.30: ದೇಶಕ್ಕಾಗಿ ತ್ಯಾಗ ಬಲಿದಾನದ ಮೂಲಕ ಮಹಾತ್ಮರೆನಿಸಿಕೊಂಡ ಗಾಂಧೀಜಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಇಂದಿನ ಯುವ ಜನತೆಗೆ ತಲುಪಿಸುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಗಾಂಧೀಜಿಯ ಸಂದೇಶವೇ ಭಾರತವನ್ನು ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಬುಧವಾರ ಜರುಗಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ ಗಾಂಧೀಜಿಯ ಮರಣ ದಿನವನ್ನು ಹುತಾತ್ಮರ ದಿನವನ್ನಾಗಿ ದೇಶವು ಆಚರಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. ಇದು ದೇಶಕ್ಕೊಂದು ಹೆಮ್ಮೆಯ ವಿಚಾರ. ಗಾಂಧೀಜಿ ದೇಶ ಭಾಂದವರ ನಾಡಿ ಮಿಡಿತವನ್ನು ಅರಿತಿದ್ದರಿಂದಲೇ ಜಾತ್ಯತೀತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಆದರೂ ಅವರ ಹತ್ಯೆಗೈದವರನ್ನು ವೈಭೀಕರಿಸುವುದು ಖಂಡನೀಯವಾಗಿದೆ. ಪಟೇಲ್ ಪ್ರತಿಮೆಯ ಸ್ಥಾಪನೆಯ ಹಿಂದೆಯೂ ರಾಜಕೀಯ ದುರುದ್ದೇಶವಿದೆ ಎಂದರು.
ದ.ಕ.ಜಿಲ್ಲಾ ಕಾಂಗ್ರೆಸ್ನ ಮಾಜಿ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪಕ್ಷದ ಮುಖಂಡರಾದ ಧನಂಜಯ ಅಡ್ಪಂಗಾಯ, ಕೆ.ಕೆ ಶಾಹುಲ್ ಹಮೀದ್, ಹಿಲ್ಡಾ ಆಳ್ವ, ಶೇಖರ್ ಕುಕ್ಕೇಡಿ, ಬಲರಾಜ್ ರೈ, ವಿಶ್ವಾಸ್ ಕುಮಾರ್ ದಾಸ್, ಬಿ.ಎಂ.ಭಾರತಿ, ನಝೀರ್ ಬಜಾಲ್, ಲಕ್ಷ್ಮಿನಾಯರ್, ಸಿ.ಎಂ.ಮುಸ್ತಫ, ನೀರಜ್ ಪಾಲ್, ಯು.ಎಚ್. ಖಾಲಿದ್ ಉಜಿರೆ, ಹಯಾತುಲ್ಲಾ, ಗಣೇಶ್ ಪೂಜಾರಿ, ಜಯಶೀಲಾ ಅಡ್ಯಂತಾಯ, ಪ್ರೇಮ್ನಾಥ್ ಪಿ.ಬಿ., ಭಾಸ್ಕರ್ ರಾವ್, ತೆರೇಜಾ ಪಿಂಟೋ, ರವಿರಾಜ್ ವಾಮಂಜೂರು, ಪಿಯೂಸ್ ಮೊಂತೆರೋ, ರಮಾನಂದ ಪೂಜಾರಿ, ಟಿ.ಕೆ. ಸುಧೀರ್, ಎಸ್.ಕೆ. ಸೌಹಾನ್, ಶಬ್ಬೀರ್ ಸಿದ್ಧಕಟ್ಟೆ, ಶಶಿರಾಜ್ ಅಂಬಟ್, ಪ್ರದೀಪ್ ಬೇಕಲ್, ಯೂಸುಫ್ ಉಚ್ಚಿಲ್, ಪದ್ಮನಾಭ ಅಮೀನ್, ಹಬೀಬ್ ಕಣ್ಣೂರು, ಸಂಜೀವ ಪಾಂಡೇಶ್ವರ್, ವಹಾಬ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಸೇವಾದಳದ ಸಂಚಾಲಕ ಎಚ್.ಎಂ.ಅಶ್ರಫ್ ವಂದಿಸಿದರು.