ದೇಶ ಪ್ರೇಮವಿದ್ದರೆ ಗಾಂಧೀಜಿಗೆ ಅವಮಾನ ಮಾಡಿದವರನ್ನು ತಕ್ಷಣ ಬಂಧಿಸಲಿ: ಯು.ಟಿ.ಖಾದರ್
ಮಂಗಳೂರು, ಫೆ.4: ದೇಶ ಪ್ರೇಮ ಇದ್ದರೆ ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿ ಅವಮಾನ ಮಾಡಿದವರನ್ನು ತಕ್ಷಣ ಬಂಧಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಲಿ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಈ ದೇಶದ ಹೆಗ್ಗುರುತಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟವರು.ವಿದೇಶದಲ್ಲಿ ಗಾಂಧೀಯ ನಾಡಿನಿಂದ ಬಂದವರ ಎಂದು ಭಾರತೀಯ ರನ್ನು ಗುರುತಿಸುವಷ್ಟರ ಮಟ್ಟಿಗೆ ಅವರ ಐಡೆಂಟಿ ಇದೆ. ದೇಶಕ್ಕಾಗಿ ತಮ್ಮ ಬದುಕನ್ನೇ ಸಮರ್ಪಸಿದ ವ್ಯಕ್ತಿಗೆ ಮಾಡಿರುವ ಅವಮಾನ ದೇಶ ದ್ರೋಹವಾಗಿದೆ. ಗಾಂಧಿಯನ್ನು ಕೊಂದ ಕೊಲೆಗಾರ ಗೋಡ್ಸೆಯನ್ನು ವೈಭವೀಕರಿಸುವ ಕೆಲಸ ಒಂದು ಕಡೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹೇಳಿದರು.
Next Story