ಗುಡ್ಡೆಅಂಗಡಿ: ಫೆ. 11ರಿಂದ ಧಾರ್ಮಿಕ ಉಪನ್ಯಾಸ, ಉರೂಸ್ ಕಾರ್ಯಕ್ರಮ
ಬಂಟ್ವಾಳ, ಫೆ. 7: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಹಝ್ರತ್ ಶೈಖ್ ಮೌಲವಿ (ಖ.ಸಿ) ಅವರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮದ 39ನೇ ವಾರ್ಷಿಕ (ಹಗಲು ಉರೂಸ್) ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳು ಫೆ. 11 ರಿಂದ 17ರವರೆಗೆ ಇಲ್ಲಿನ ಮಸೀದಿ ವಠಾರದಲ್ಲಿ ನಡೆಯಲಿದೆ.
ಅತ್ರಾಡಿ ಖಾಝಿ ಹಾಜಿ ವಿ.ಕೆ. ಅಬೂಬಕರ್ ಮುಸ್ಲಿಯಾರ್ ಅಡ್ಯಾರ್-ಕಣ್ಣೂರು ಉದ್ಘಾಟಿಸಲಿದ್ದು, ಸೈಯದ್ ಫಕ್ರುದ್ದೀನ್ ಹಸನಿ ಅಲ್-ಖಾದಿರಿ ದಾರಿಮಿ ತಂಙಳ್ ತಾನೂರು-ಕೇರಳ ಅವರು ಸಮಾರೋಪ ಸಮಾರಂಭದ ನೇತೃತ್ವ ವಹಿಸುವರು. ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸುವರು.
ಪ್ರತಿ ದಿನ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಕ್ರಮವಾಗಿ ಅಬ್ದುಲ್ಲಾ ರಹ್ಮಾನಿ ಬಾಂಬಿಲ ಅವರು ಸಂತುಷ್ಟ ಕುಟುಂಬಕ್ಕೆ ಇಸ್ಲಾಮಿನ ಮಾರ್ಗಸೂಚಿಗಳು ಹಾಗೂ ಯುವಕರು ದೀನಿನ ಸ್ಥಂಭಗಳು ಎಂಬ ವಿಷಯದಲ್ಲಿ, ಅಶ್ರಫ್ ಫೈಝಿ ಮಿತ್ತಬೈಲು ಅವರು ಅಂತ್ಯ ದಿನದ ಲಕ್ಷಣಗಳು ಎಂಬ ವಿಷಯದಲ್ಲಿ, ಅಬ್ದುಲ್ಲ ವಹಬಿ ಎಂ.ಡಿ. ಆರೂರು ಅವರು ಕೈ ತಪ್ಪಿ ಹೋಗುತ್ತಿರುವ ರಕ್ಷಣೆಯ ಮಾರ್ಗಗಳು ಎಂಬ ವಿಷಯದಲ್ಲಿ, ಎಂ.ಕೆ. ಹನೀಫ್ ಮುಸ್ಲಿಯಾರ್ ಅಡ್ಯಾರ್-ಕಣ್ಣೂರು ಅವರು ಪರಲೋಕ ವಿಚಾರಣೆಯ ಕ್ಷಣ ದರ್ಶನ ಎಂಬ ವಿಷಯದಲ್ಲಿ, ಸಿ.ಎಂ. ಅನ್ಸಾರ್ ಫೈಝಿ ಬುರ್ಹಾನಿ ಅವರು ಕಬರಿನ ಶಿಕ್ಷೆಯಿಂದ ರಕ್ಷೆ ಹೊಂದಲು ಕಾರಣಗಳು ಎಂಬ ವಿಷಯದಲ್ಲಿ ಉಪನ್ಯಾಸಗೈಯುವರು.
ಇದೇ ವೇಳೆ ಎ.ಎ. ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ ಅವರ ನೇತೃತ್ವದಲ್ಲಿ ಖತಮುಲ್ ಕುರ್ಆನ್ ಪಾರಾಯಣ ನಡೆಯಲಿದ್ದು, ಸೈಯದ್ ಹುಸೈನ್ ಬಾ ಅಲವಿ ತಂಙಳ್ ಕುಕ್ಕಾಜೆ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಮರ್ಹೂಂ ಶೈಖುನಾ ಮಿತ್ತಬೈಲು ಉಸ್ತಾದ್ ಅನುಸ್ಮರಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ಗೇರು ಅಭಿವೃದ್ಧಿನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು, ರಾಜೀವ್ ಗಾಂಧಿ ಆರೋಗ್ಯ ಯೂನಿರ್ವಸಿಟಿ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕಾರ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕರ್ ಸಿದ್ದಿಕ್ ಗುಡ್ಡೆಅಂಗಡಿ, ಸೈದಾಲಿ ಮುಸ್ಲಿಯಾರ್ ಮಾಣಿ, ಅಬ್ಬಾಸ್ ಮುಸ್ಲಿಯಾರ್, ಎಸ್. ಮುಹಮ್ಮದ್, ಪಿ.ಬಿ. ಅಹ್ಮದ್ ಹಾಜಿ, ಹಾಜಿ ಬಿ.ಎ. ಮುಹಮ್ಮದ್ ನೀಮಾ ಮೊದಲಾದವರು ಭಾಗವಹಿಸುವರು ಎಂದು ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಶೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.