ಪೊಲೀಸರ ಕ್ರಮಕ್ಕೆ ಸಿಪಿಎಂ ಶ್ಲಾಘನೆ
ಉಡುಪಿ, ಫೆ.11: ಕೋಟ ಇಬ್ಬರು ಯುವಕರ ಕೊಲೆ ಪ್ರಕರಣದಲ್ಲಿ ತುರ್ತು ಕ್ರಮ ವಹಿಸಿ ಆರೋಪಿಗಳನ್ನು ಬಂಧಿಸಿದ ಪೋಲೀಸರ ಕ್ರಮವನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಶ್ಲಾಘಿಸಿದೆ.
ಇಬ್ಬರು ಯುವಕರ ಕೊಲೆಯ ಹಿಂದೆ ಕೇವಲ ಜಾಗದ ಜಗಳವಲ್ಲದೆ ಪ್ರಭಾವಿ ವ್ಯಕ್ತಿಗಳ ಪಾತ್ರವು ಇದೆ ಎಂದು ಖಚಿತವಾಗಿದೆ. ಬಂಧಿತರಲ್ಲಿ ಬಿಜೆಪಿಗೆ ಸೇರಿದ ಜಿಪಂ ಸದಸ್ಯರು ಸೇರಿದ್ದು ಈ ಸುದ್ದಿಗೆ ಪುಷ್ಟಿ ನೀಡಿದೆ. ಆರೋಪಿ ರಾಘವೇಂದ್ರ ಕಾಂಚನ್ ಕೂಡಲೇ ಜಿಪಂ ಸದಸ್ಯ ಸ್ಥಾನಕ್ಕೆ ರಾಜೀ ನಾಮೆ ನೀಡಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Next Story