ದಾರುನ್ನೂರ್ ವಿದ್ಯಾ ಕೇಂದ್ರಕ್ಕೆ ಶಂಸುದ್ದೀನ್ ಸೂರಲ್ಪಾಡಿ ಭೇಟಿ
ಮಂಗಳೂರು, ಫೆ. 12: ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶಂಸುದ್ದೀನ್ ಸೂರಲ್ಪಾಡಿ ಅವರು ದಾರುನ್ನೂರ್ ವಿದ್ಯಾ ಕೇಂದ್ರಕ್ಕೆ ಭೇಟಿ ನೀಡಿದರು.
ಶಂಸುದ್ದೀನ್ ಸೂರಲ್ಪಾಡಿ ಅವರನ್ನು ಈ ಸಂದರ್ಭ ದಾರುನ್ನೂರ್ ಕೇಂದ್ರ ಸಮಿತಿಯ ಸದಸ್ಯರು ಸ್ವಾಗತಿಸಿದರು.
ಕೇಂದ್ರ ಸಮಿತಿಯ ಪರವಾಗಿ ಅಧ್ಯಕ್ಷರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಮೂಡುಬಿದಿರೆ ವಲಯದ ಪರವಾಗಿ ಉಸ್ಮಾನ್ ಹಾಜಿ ಏರ್ ಇಂಡಿಯಾ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಮಿತಿಯ ಪರವಾಗಿ ಮೆಟ್ರೋ ಶಾಹುಲ್ ಹಮೀದ್, ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಪರವಾಗಿ ಐ. ಮೊಯಿದಿನಬ್ಬ ಹಾಜಿ ಹಾಗೂ ಮುಸ್ತಫಾ ಭಾರತ್ ಅವರು ಸನ್ಮಾನಿಸಿದರು.
ಈ ಸಂದರ್ಭ ದಾರುನ್ನೂರ್ ಕೇಂದ್ರ ಸಮಿತಿಯ ಗೌರವ ಅಧ್ಯಕ್ಷರಾದ ಯೆನೆಪೊಯ ಮುಹಮ್ಮದ್ ಕುಂಞಿ, ಉಪಾಧ್ಯಕ್ಷರುಗಳಾದ ಫಕೀರಬ್ಬ ಮಾಸ್ಟರ್, ಅಬೂಬಕರ್ ಮೂಡುಬಿದಿರೆ, ರಶೀದ್ ಹಾಜಿ, ಕೋಶಾಧಿಕಾರಿ ಸೈಯದ್ ಬಾಷಾ ತಂಙಳ್, ಜನರಲ್ ಮ್ಯಾನೇಜರ್ ಹಾಸ್ಕೋ ಅಬ್ದುಲ್ ರಹ್ಮಾನ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕಾರ್ಯದರ್ಶಿಗಳಾದ ಸಮದ್ ಹಾಜಿ, ರಿಯಾಝ್ ಹಾಜಿ, ಯೂತ್ ಟೀಮ್ ಅಧ್ಯಕ್ಷ ನೌಷಾದ್ ಹಾಜಿ, ಲತೀಫ್ ಹಾಜಿ ಮದರ್ ಇಂಡಿಯಾ, ಸದಸ್ಯರುಗಳಾದ ಅಹ್ಮದ್ ಹುಸೈನ್, ಹಸನ್ ಕುಟ್ಟಿ, ಅಝೀಝ್ ಮಾಲಿಕ್, ಶಫೀಕ್ ಕಡಬ, ಅದ್ದು ಹಾಜಿ, ನಾಝಿಮುದ್ದೀನ್ ಅಂಗರಕರಿಯ, ಸಲಾಮ್ ಬೂಟ್ ಬಝರ್, ಎಂ ಜಿ ಹಾಜಿ ತೋಡಾರ್, ರಫೀಕ್ ಕೋಡಾಜೆ, ಹಕೀಮ್ ಪರ್ತಿಪಾಡಿ, ಪ್ರಾಂಶುಪಾಲರಾದ ಹುಸೈನ್ ರಹ್ಮಾನಿ, ಮ್ಯಾನೇಜರ್ ಅಬ್ದುಲ್ ಹಕೀಮ್ ಉಪಸ್ಥಿತರಿದ್ದರು.