ಯೋಧರ ಹತ್ಯೆ: ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಖಂಡನೆ
ಉಡುಪಿ, ಫೆ.15: ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಉತ್ತರ ವಲಯ ತೀವ್ರವಾಗಿ ಖಂಡಿಸಿದೆ.
ದೇಶದಿಂದ ಭಯೋತ್ಪಾದನೆ ತೊಲಗಬೇಕಾಗಿದೆ. ದೇಶ ನೆಮ್ಮದಿಯ ಉಸಿರಿ ನಿಂದ ಬದುಕಬೇಕಾಗಿದೆ. ಸದಾ ಭಾರತದ ಮೇಲೆ ದಾಳಿ ಮಾಡುವಂತಹ ವಿರೋಧಿ ರಾಷ್ಟ್ರದ ಉಗ್ರರು, ಈ ಬಾರಿ ದೇಶದ ಇತಿಹಾಸದಲ್ಲೇ ಘೋರ ದುರಂತ ಸೃಷ್ಟಿ ಮಾಡಿದೆ. ಇಂತಹ ಉಗ್ರರು ಸರ್ವನಾಶ ಆಗಲೇಬೇಕು ಎಂದು ಪ್ರಧಾನ ಕಾರ್ಯದರ್ಶಿ ಸ್ಟೀನ್ ಕುಲಾಸೊ ಉದ್ಯಾವರ ತಿಳಿಸಿದ್ದಾರೆ.
Next Story