ಪ್ರಧಾನ ಮಂತ್ರಿ ಶ್ರಮ ಯೋಗಿ ಪಿಂಚಣಿ ಯೋಜನೆ
ಉಡುಪಿ, ಫೆ.15: ಪ್ರಧಾನ ಮಂತ್ರಿ ಶ್ರಮಯೋಗಿ ಪಿಂಚಣಿ ಯೋಜನೆಯು ಫೆ.15ರಿಂದ ಕಾರ್ಯಾರಂಭ ಮಾಡಿದೆ.ಬೀದಿ ವ್ಯಾಪಾರಿಗಳು, ಬೀಡಿ/ ಸಿನೆಮಾ/ಗಣಿ/ಇಟ್ಟಿಗೆ ಕಾರ್ಮಿಕರು, ಸರಕುಗಳನ್ನು ಲೋಡ್ ಮಾಡುವವರು, ಬಟ್ಟೆ ಒಗೆಯುವವರು, ರಿಕ್ಷಾ ತುಳಿಯುವವರು, ಕೃಷಿ ಕಟ್ಟಡ ನಿರ್ಮಾಣ, ಕೈಮಗ್ಗ, ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
18 ವರ್ಷ ಮೇಲ್ಪಟ್ಟ 40 ವರ್ಷ ಒಳಗಿನ, ತಿಂಗಳ ಆದಾಯ 15,000 ರೂ.ಮೀರದಂತೆ ಇರುವ ಕಾರ್ಮಿಕರು ಯೋಜನೆಗೆ ಅರ್ಹರಾಗಿರುವರು. 18 ವರ್ಷ ಮೇಲ್ಪಟ್ಟ 40 ವರ್ಷ ಒಳಗಿನ, ತಿಂಗಳ ಆದಾಯ 15,000 ರೂ.ಮೀರದಂತೆ ಇರುವ ಕಾರ್ಮಿಕರು ಯೋಜನೆಗೆ ಅರ್ಹರಾಗಿರುವರು. ಈ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಮತ್ತು ಸದಸ್ಯತ್ವ ಪಡೆಯಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ಅಧೀನದಲ್ಲಿರುವ ಹಾಗೂ ಕಾರ್ಮಿಕ ಕಲ್ಯಾಣ ಸಂಸ್ಥೆಯಿಂದ ನಡೆಸುತ್ತಿರುವ ಈ ಮುಂದಿನ ಆರೋಗ್ಯ ಕೇಂದ್ರಗಳಾದ, ದೇರಳಕಟ್ಟೆ ದೂ.ಸಂಖ್ಯೆ: 0820-220208, ಕೈಕಂಬ ದೂ.ಸಂಖ್ಯೆ; 0824-2259433, ಕಲ್ಲಡ್ಕ ದೂ.ಸಂಖ್ಯೆ: 0855-275045, ಕಾರ್ಕಳ ದೂ.ಸಂಖ್ಯೆ: 08258-235530, ಕಾಟಿಪಟ್ಟಿ ದೂ.ಸಂಖ್ಯೆ: 0824-2273117, ಮೂಡಬಿದರೆ ದೂ.ಸಂಖ್ಯೆ: 08258-239197, ಪಡೀಲ್ ದೂ.ಸಂಖ್ಯೆ: 0820-2275323, ಪುತ್ತೂರು ದೂ.ಸಂಖ್ಯೆ: 08251-231223, ತುಂಬೆ ದೂ.ಸಂಖ್ಯೆ: 08255-233487, ಉಡುಪಿ ದೂ.ಸಂಖ್ಯೆ:08202-580482, ಉಪ್ಪಿನಂಗಡಿ ದೂ.ಸಂಖ್ಯೆ: 08251- 250133, ವಾಮನಪದವು ದೂ.ಸಂಖ್ಯೆ: 08255-282026ದಲ್ಲಿ ಪಡೆಯಬಹುದು ಎಂದು ರಾಜ್ಯ ಕಾರ್ಮಿಕ ಕಲ್ಯಾಣ ಮತ್ತು ಉಪಕರ ಆಯುಕ್ತ ಕೆ. ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.