ತೆಂಕನಿಡಿಯೂರು: ಚುನಾವಣಾ ಸಾಕ್ಷರತಾ ಅಭಿಯಾನ ಜಾಥಾ
ಉಡುಪಿ, ಫೆ.15: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಶುಕ್ರವಾರ ಚುನಾವಣಾ ಸಾಕ್ಷರತಾ ಅಭಿಯಾನ ರ್ಯಾಲಿಯನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಾಥಾಕ್ಕೆ ಚಾಲನೆ ನೀಡಿದ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ ಮತದಾನದ ಅರಿವಿನ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜಾಥಾವನ್ನು ಚುನಾವಣಾ ಸಾಕ್ಷರತಾ ಕ್ಲಬ್ನ ಉಪನ್ಯಾಸಕ ಸಂಚಾಲಕ ಮಂಜುನಾಥ ಮತ್ತು ದಯಾನಂದ ಕುಮಾರ್ ಮುನ್ನಡೆಸಿದರು. ಕಾಲೇಜಿನಿಂದ ಹೊರಟ ಜಾಥಾ ತೆಂಕನಿಡಿಯೂರು ಗ್ರಾಪಂ ಪರಿಸರದ ಬೀದಿಗಳಲ್ಲಿ ಸಾಗಿತು. ವಿದ್ಯಾರ್ಥಿಗಳು ಘೋಷಣೆಗಳ ಮೂಲಕ ಮತದಾನದ ಅರಿವನ್ನು ಮೂಡಿಸಿ ದರು. ಜಾಥಾದಲ್ಲಿ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿಯ ಸುಮಾರು 200 ವಿದ್ಯಾರ್ಥಿಗಳು ಬಾಗವಹಿಸಿದ್ದರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Next Story