ಬೈಕ್ಗೆ ಲಾರಿ ಢಿಕ್ಕಿ: ಸವಾರ ಮೃತ್ಯು
ಮಂಗಳೂರು, ಫೆ.15: ಬೈಕ್ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಬಂಟ್ವಾಳ ತಲಪಾಡಿ ನಿವಾಸಿ ಚಂದ್ರ ಪೂಜಾರಿ (45) ಮೃತ ವ್ಯಕ್ತಿ.
ಮೃತರು ರಾ.ಹೆ.73ರ ಬಿ.ಸಿ.ರೋಡ್ನಿಂದ ಮಂಗಳೂರು ಕಡೆಗೆ ಬೈಕ್ನಲ್ಲಿ ಬೆಳಗ್ಗೆ ಆಗಮಿಸುತ್ತಿದ್ದರು. ಬೈಕ್ ಅಡ್ಯಾರು ಗ್ರಾಮದ ಕಾಲೇಜೊಂದರ ಎದುರು ತಲುಪುತ್ತಿದ್ದಂತೆ ಹಿಂದಿನಿಂದ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಚಂದ್ರ ಪೂಜಾರಿ ಮೋಟಾರ್ ಸೈಕಲ್ ಸಮೇತ ಡಾಂಬರ್ ರಸ್ತೆಗೆ ಬಿದ್ದು ಅವರ ಎದೆಯ ಬಲ ಬದಿಗೆ ಹಾಗೂ ಹೊಟ್ಟೆಯ ಬಲಬದಿಗೆ ಗಂಭೀರ ಸ್ವರೂಪದ ಗುದ್ದಿದ ಗಾಯಗಳಾಗಿವೆ.
ಕೂಡಲೇ ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಗಾಯಾಳು ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story