ಕೋಟ ಜೋಡಿ ಕೊಲೆ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿಗೆ ಆಕ್ಷೇಪ
ಕುಂದಾಪುರ, ಫೆ.16: ಕೋಟ ಮಣೂರಿನಲ್ಲಿ ಜೋಡಿಕೊಲೆ ಪ್ರಕರಣದ ಮೂರು ಆರೋಪಿಗಳು ಕುಂದಾಪುರ ಹೆಚ್ಚುವರಿ ನ್ಯಾಯಾಲಯ ದಲ್ಲಿ ಸಲ್ಲಿಸಿದ ಜಾಮೀನು ಅರ್ಜಿಗೆ ಇಂದು ಪ್ರತಿವಾದ ಮಂಡಿಸಿದ ಸಹಾಯಕ ಸರಕಾರಿ ಅಭಿಯೋಜಕಿ ಸುಮಂಗಲಾ ನಾಯಕ್ ಆಕ್ಷೇಪಣೆ ಸಲ್ಲಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಪೊಲೀಸ್ ಸಿಬಂದಿಯಾದ ಪವನ್ ಅಮೀನ್, ವೀರೇಂದ್ರ ಆಚಾರ್ಯ ಹಾಗೂ ವಿದ್ಯಾರ್ಥಿ ಪ್ರಣವ್ ರಾವ್ ಜಾಮೀನಿಗಾಗಿ ಫೆ.15ರಂದು ಅರ್ಜಿ ಸಲ್ಲಿಸಿದ್ದು, ಅದೇ ದಿನ ಆರೋಪಿ ಪರ ವಕೀಲ ರವಿಕಿರಣ್ ಮುರ್ಡೇಶ್ವರ ವಾದ ಮಂಡಿಸಿದ್ದರು.
ವಾದ- ಪ್ರತಿವಾದವನ್ನು ಆಲಿಸಿದ ಹೆಚ್ಚುವರಿ ಜೆಎಂಎ್ಸಿ ನ್ಯಾಯಾ ಲಯದ ನ್ಯಾಯಾಧೀಶ ಶ್ರೀಕಾಂತ್, ಫೆ.19ಕ್ಕೆ ಆದೇಶ ನೀಡುವುದಾಗಿ ಘೋಷಿಸಿದ್ದಾರೆ. ಪ್ರಕರಣದ ಬಂಧಿತ 16 ಆರೋಪಿಗಳ ಪೈಕಿ ಇಬ್ಬರಿಗೆ ಫೆ.20ರ ವರೆಗೆ ಪೊಲೀಸ್ ಕಸ್ಟಡಿ ಹಾಗೂ ಇತರ 14 ಮಂದಿಗೆ ಮಾ.1ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story