ಡಾ.ಮಾಧವಿ ಎಸ್. ಭಂಡಾರಿಗೆ ‘ಸಕಾಲಿಕ ಸಾಹಿತ್ಯ ಪ್ರಶಸ್ತಿ’
ಉಡುಪಿ, ಫೆ.18: ಅಂಕೋಲಾದ ಅಂಬಾರಕೊಡ್ಲಿನ ದಿ. ಕವಿತಾ ವಿಷ್ಣು ನಾಯ್ಕ ಹೆಸರಿನಲ್ಲಿ ನೀಡುವ ‘ಸಕಾಲಿಕ ಸಾಹಿತ್ಯ ಪ್ರಶಸಿ’ಯನ್ನು ಈ ಬಾರಿ ಸಾಹಿತಿ, ಅನುವಾದಕಿ ಉಡುಪಿಯ ಡಾ.ಮಾಧವಿ ಎಸ್.ಭಂಡಾರಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ ಹತ್ತು ಸಾವಿರ ರೂ. ನಗದನ್ನು ಒಳ ಗೊಂಡಿದೆ. ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಅನುಪಮ ಸೇವೆಗಾಗಿ ಡಾ.ಮಾಧವಿ ಎಸ್. ಭಂಡಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ. ಜಿ. ಎಚ್. ನಾಯಕ್, ಹೋರಾಟಗಾರ್ತಿ ಮೀರಾ ಜಿ. ನಾಯಕ್, ವಿಷ್ಣು ನಾಯ್ಕ ಅಂಕೋಲ, ಪ್ರೊ.ರಾಮಕೃಷ್ಣ ಗುಂದಿ ಮೊದಲಾದವರು ಉಪಸ್ಥಿತರಿದ್ದರು.
Next Story