ಬಾವಿಯಲ್ಲಿ ಮೃತದೇಹ ಪತ್ತೆ
ಕಾರ್ಕಳ, ಫೆ.18: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಫೆ.17ರಂದು ಸಂಜೆ ವೇಳೆ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಮುಂಡ್ಕೂರು ಎಂಬಲ್ಲಿ ನಡೆದಿದೆ.
ಮೃತರನ್ನು ಮುಂಡ್ಕೂರು ನಿವಾಸಿ ಸವೇರ್ ಮಸ್ಕರೇನಸ್ ಎಂಬವರ ಮಗ ರೋಶನ್ ಮಸ್ಕರೇನಸ್ (33) ಎಂದು ಗುರುತಿಸಲಾಗಿದೆ. ಇವರು ಫೆ.16 ರಂದು ಸಂಜೆ ಮನೆಯಿಂದ ಓಡಿ ಹೋಗಿ ನಾಪತ್ತೆಯಾಗಿದ್ದರು. ಮರುದಿನ ಸಂಜೆ ಇವರ ಮೃತದೇಹ ಮನೆಯ ಬಳಿ ತೋಟದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story